- Advertisement -
- Advertisement -
ಮಂಗಳೂರು: ಗೋ ಮಾಂಸ ಸಾಗಿಸುತ್ತಿದ್ದ ವಾಹನದ ಮೇಲೆ ಬಜರಂಗದಳ ಸಂಘಟನೆಯ ಕಾರ್ಯಕರ್ತರು ದಾಳಿ ನಡೆಸಿರುವ ಘಟನೆ ಮಂಗಳೂರು ನಗರದಲ್ಲಿ ನಡೆದಿದೆ.
ಮಂಗಳೂರಿನ ಉರ್ವ ಸ್ಟೋರ್ ಬಳಿ ತಡರಾತ್ರಿ ಜೋಕಟ್ಟೆಯಿಂದ ಮಂಗಳೂರು ನಗರದ ಬೀಫ್ ಸ್ಟಾಲ್ ಗಳಿಗೆ ಸರಬರಾಜು ಮಾಡುತ್ತಿದ್ದ ವೇಳೆ ದಾಳಿ ನಡೆಸಲಾಗಿದೆ.
ಸುಮಾರು 2.5 ಕ್ವಿಂಟಾಲ್ ಗೂ ಹೆಚ್ಚಿನ ಗೋ ಮಾಂಸ ತುಂಬಿದ್ದ ಆಟೋ ರಿಕ್ಷಾವನ್ನು ತಡೆದ ನಿಲ್ಲಿಸಿ ಬಜರಂಗದಳ ಕಾರ್ಯಕರ್ತರು ಉರ್ವ ಪೊಲೀಸರಿಗೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಈ ವೇಳೆ ಮಾಂಸ ಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಕೂಡಾ ಪೊಲೀಸರು ವಶಕ್ಕೆ ಪಡೆದಿದ್ದು ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -