- Advertisement -
- Advertisement -
ಅಹಮದಾಬಾದ್: ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾಗಿ ಪಾಟೀದಾರ್ ಮೀಸಲು ಹೋರಾಟ ಸಮಿತಿ ಮುಖಂಡ ಹಾರ್ದಿಕ್ ಪಟೇಲ್ ನೇಮಕಗೊಂಡಿದ್ದಾರೆ. ಈ ಸಂಬಂಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇಮಕ ಆದೇಶ ಹೊರಡಿಸಿದ್ದಾರೆ. ಪ್ರಸ್ತುತ ಅಮಿತ್ ಚಾವ್ಡಾ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ.
ಬಿಜೆಪಿ ಭದ್ರಕೋಟೆ ಗುಜರಾತ್ನಲ್ಲಿ ಪಾಟೀದಾರ್ ಮೀಸಲಾತಿ ಚಳವಳಿ ಆರಂಭಿಸಿ ದೇಶದ ಗಮನಸೆಳೆದವರು ಹಾರ್ದಿಕ್ ಪಟೇಲ್. ಹಾರ್ದಿಕ್ ಪಟೇಲ್ ಕಳೆದ ವರ್ಷ ಲೋಕಸಭೆ ಚುನಾವಣೆಗೂ ಮೊದಲು ಮಾರ್ಚ್ ತಿಂಗಳಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದರು. ಗುಜರಾತ್ನಲ್ಲಿ ನೆಲಕಚ್ಚಿರುವ ಕಾಂಗ್ರೆಸ್ ಪಕ್ಷವನ್ನು ಬಡಿದೆಬ್ಬಿಸಬೇಕಾದ ಸವಾಲು ಕಾರ್ಯಾಧ್ಯಕ್ಷರಾಗಿ ನೇಮವಾಗಿರುವ ಪಟೇಲ್ ಎದುರಿಗಿದೆ.
- Advertisement -