Saturday, May 18, 2024
Homeಪ್ರಮುಖ-ಸುದ್ದಿಕೃಷಿ ಸಚಿವರಿಂದ ರೈತರಿಗೆ ಸಿಕ್ತು ಗುಡ್ ನ್ಯೂಸ್

ಕೃಷಿ ಸಚಿವರಿಂದ ರೈತರಿಗೆ ಸಿಕ್ತು ಗುಡ್ ನ್ಯೂಸ್

spot_img
- Advertisement -
- Advertisement -

ಬೆಂಗಳೂರು : ಕೃಷಿ ಸಮ್ಮಾನ್ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 1 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ. ಇದರಿಂದ 50 ಲಕ್ಷ ರೈತರಿಗೆ ಲಾಭ ಸಿಗಲಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.

ಹಾವೇರಿ ತಾಲ್ಲೂಕಿನ ಅಗಡಿಯಲ್ಲಿ ಮಾತನಾಡಿದ ಅವರು, ಇಂದು ಬೆಳಗ್ಗೆಯಿಂದಲೇ ರೈತರ ಖಾತೆಗೆ ಹಣ ಜಮಾ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.

2019 -20 ನೇ ಸಾಲಿನಲ್ಲಿ ಬೆಳೆ ವ್ಯತ್ಯಾಸ ಸೇರಿದಂತೆ ಕೆಲವು ಸಮಸ್ಯೆಯಿಂದ ಬೆಳೆ ವಿಮೆ ಹಣ ಏನೂ ಬಂದಿರಲಿಲ್ಲ. ಮಂಗಳವಾರದಿಂದ ವಿಮೆ ಹಣ ಸಂಪೂರ್ಣ ಜಮಾ ಆಗಲಿದೆ. 2015 -16 ನೇ ಸಾಲಿನ 6 ಕೋಟಿಗೂ ಅಧಿಕ ಬೆಳೆ ವಿಮೆ ಬಾಕಿ ಇದೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ರೈತರಿಗೆ ಹಣ ಬಂದಿಲ್ಲ. ಈಗ ವಿಮೆ ಹಣ ಬಿಡುಗಡೆಗೆ ಆರ್ಥಿಕ ಇಲಾಖೆಗೆ ಹೋಗಿದೆ.

ಕಾಳಸಂತೆಯಲ್ಲಿ ಯೂರಿಯಾ ಮಾರಾಟ ಮಾಡುವುದು ತಪ್ಪು. ಕೃತಕ ಅಭಾವ ಸೃಷ್ಟಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಲೈಸೆನ್ಸ್ ರದ್ದು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!