- Advertisement -
- Advertisement -
ಕಟೀಲು: ಅಮೃತ ಮಹೋತ್ಸವದ ವೇಳೆ ಪ್ರತಿ ಮನೆಯಲ್ಲಿ ಧ್ವಜ ಹಾರುತ್ತಿದೆ. ಪ್ರತಿ ಹೃದಯದಲ್ಲೂ ದೇಶಭಕ್ತಿ ಅನುರಣಿಸುತ್ತಿದೆ. ಕೇವಲ ಮನೆಗಳಲ್ಲಿ ಮಾತ್ರವಲ್ಲ ದೇಗುಲಗಳಲ್ಲೂ ದೇವರನ್ನು ತ್ರಿವರ್ಣಗಳಿಂದ ಅಲಂಕರಿಸಲಾಗಿದೆ.
ಕರಾವಳಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಇಂದಿನ ಅಲಂಕಾರವು ಭಕ್ತರನ್ನು ಸಂತೃಪ್ತಗೊಳಿಸಿದೆ. ಕೇಸರಿ, ಬಿಳಿ ಹಸಿರಿನ ಸೀರೆ ದೇವಿಗೆ ಇನ್ನಷ್ಟು ಕಳೆ ತುಂಬಿದೆ. ಅದರೊಂದಿಗೆ ತ್ರಿವರ್ಣ ಬಣ್ಣದ ಹೂವಿನ ಅಲಂಕಾರ ಕಣ್ಣುಂಬಿಕೊಳ್ಳಲು ಎರಡು ಕಣ್ಣು ಸಾಲದು ಎಂಬಂತಿದೆ.
- Advertisement -