- Advertisement -
- Advertisement -
ಬೆಂಗಳೂರು : ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ಅವರು ಜೀವನದ ಕೆಲವು ಕಹಿ ಘಟನೆಗಳ ನಂತರ ಈಗ ಮತ್ತೆ ಸಿನಿಪ್ರಯಾಣಕ್ಕೆ ಮರಳಿದ್ದಾರೆ. ನಟ ಧ್ರುವ ಸರ್ಜಾ ನಾಯಕನಾಗಲಿರುವ ನಂದಕಿಶೋರ್ ನಿರ್ದೇಶನದ, ಹೊಸ ಸಿನಿಮಾದ ಮುಹೂರ್ತ ಇಂದು ನಗರದ ನೆರವೇರಿತು.ವಾಸವಿ ಎಂಟರ್ಪ್ರೈಸಸ್ ಅಡಿಯಲ್ಲಿ ಉದಯ್ ಕೆ. ಮೆಹ್ತಾ ಪ್ರೊಡಕ್ಸನ್ಸ್ ಬ್ಯಾನರ್ನಲ್ಲಿ ‘ದುಬಾರಿ’ ಚಿತ್ರ ಮೂಡಿಬರಲಿದೆ.’ದುಬಾರಿ’ಯ ಮುಹೂರ್ತ ನಗರದ ಗಣೇಶ ಮಂದಿರದಲ್ಲಿ ನೆರವೇರಿದೆ.
ಹಿರಿಯ ನಟ ದೊಡ್ಡಣ್ಣ ಮತ್ತು ನಟಿ ತಾರಾ ಮುಹೂರ್ತಕ್ಕೆ ಚಾಲನೆ ನೀಡಿ, ಕ್ಲಾಪ್ ಮಾಡಿದರು.ಚಿತ್ರತಂಡ, ಇದೇ ತಿಂಗಳ ಕೊನೆಯ ವಾರದಲ್ಲಿ ಚಿತ್ರೀಕರಣ ಆರಂಭಿಸಲಿದ್ದು, ಪೊಗರು ಸಿನಿಮಾ ಚಿತ್ರಕಥೆ ಎಲ್ಲವೂ ಅಂತಿಮವಾಗಿದೆ.’ದುಬಾರಿ’ ಬೆಂಗಳೂರು, ಮಂಡ್ಯ ಮತ್ತು ವಿದೇಶದ ಹಲವೆಡೆ ಶೂಟಿಂಗ್ ನಡೆಯಲಿದೆ ಎನ್ನಲಾಗುತ್ತಿದೆ.
- Advertisement -