- Advertisement -
- Advertisement -
ಮುಂಬೈ: ಮಾದಕ ಜಾಲದ ಕುರಿತಾದ ತನಿಖೆ ದಿನದಿಂದ ದಿನಕ್ಕೆ ಚುರುಕುಗೊಳ್ಳುತ್ತಿದೆ. ಆದರೆ ಈಗ ಬಂದಿರುವ ಹೊಸ ಮಾಹಿತಿಯ ಪ್ರಕಾರ ಏನ್ ಸಿ ಬಿ ಯಿಂದ ವಿಚಾರಣೆಗೆ ನೋಟಿಸ್ ನೀಡಿದ್ದರೂ ವಿಚಾರಣೆಗೆ ಹಾಜರಾಗದ ದೀಪಿಕಾ ಪಡುಕೋಣೆ ಮ್ಯಾನೇಜರ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಕರಿಷ್ಮಾ ಪ್ರಕಾಶ್ ದೀಪಿಕಾ ಪಡುಕೋಣೆ ಮ್ಯಾನೇಜರ್ ಆಗಿದ್ದು ಆಕೆಗೆ ಬಂಧನದ ಭೀತಿಯಿದೆ ಎನ್ನಲಾಗಿದೆ.
ಮೊದಲಬಾರಿಯ ಏನ್ ಸಿ ಬಿ ನೋಟಿಸ್ ಗೆ ಪ್ರತಿಯಾಗಿ ಕರಿಷ್ಮಾ ಪ್ರಕಾಶ್ ವಿಚಾರಣೆ ಎದುರಿಸಿದ್ದರು. ಆದರೆ ಎರಡನೇ ಬಾರಿಯ ನೋಟಿಸ್ ಗೆ ಗೈರಾಗಿದ್ದರು. ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
- Advertisement -