Wednesday, April 24, 2024
Homeತಾಜಾ ಸುದ್ದಿದೇವರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಆತ್ಮಹತ್ಯೆಗೆ ಶರಣಾದ ವ್ಯಕ್ತಿ!..

ದೇವರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಆತ್ಮಹತ್ಯೆಗೆ ಶರಣಾದ ವ್ಯಕ್ತಿ!..

spot_img
- Advertisement -
- Advertisement -

ತಮಿಳುನಾಡು:ಇಲ್ಲಿನ ನಾಗರ್​​​ಕೊಯಿಲ್​​ ನಿವಾಸಿ ಯೊಬ್ಬ ಕೆಲಸವಿಲ್ಲ ಎಂದು ಪರಿತಪಿಸುತ್ತಿದ್ದು, ಉದ್ಯೋಗ ಸಿಕ್ಕ ತಕ್ಷಣ ಆತ್ಮಹತ್ಯೆ ಮಾಡಿಕೊಂಡ ವಿಚಿತ್ರ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ದೇವರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಈ ನಿರ್ಧಾರ ಮಾಡಿದ್ದಾಗಿ ಡೆತ್​ನೋಟ್​ನಲ್ಲಿ ಆತ ಬರೆದಿಟ್ಟಿದ್ದಾನೆ.

ನವೀನ್​ (32) ಮೃತವ್ಯಕ್ತಿ. ಈತನು ತುಂಬ ದಿನಗಳಿಂದ ಉದ್ಯೋಗ ಸಿಕ್ಕಿರಲಿಲ್ಲ ಎಂದು ನೊಂದಿದ್ದ. ಹಾಗೇ ‘ನನಗೊಂದು ಒಳ್ಳೆಯ ಕೆಲಸ ಸಿಕ್ಕಿಬಿಟ್ಟರೆ ನಾನು ಬಂದು ನಿನ್ನೊಂದಿಗೇ ಇರುತ್ತೇನೆ’ ಎಂದು ದೇವರಿಗೆ ಹರಕೆಯನ್ನೂ ಕಟ್ಟಿಕೊಂಡಿದ್ದ.ಅದಾದ ಕೆಲವೇ ದಿನಗಳಲ್ಲಿ ನವೀನ್​ಗೆ ಬ್ಯಾಂಕ್​ ಆಫ್​ ಇಂಡಿಯಾದ ಮುಂಬೈ ಬ್ರ್ಯಾಂಚ್​​​ನಲ್ಲಿ ಒಂದೊಳ್ಳೆ ಉದ್ಯೋಗವೂ ಸಿಕ್ಕಿತು. ಆದರೆ ನವೀನ್ ಅಲ್ಲಿ​ ಕೆಲಸ ಮಾಡಿದ್ದು 15 ದಿನಗಳು ಮಾತ್ರ.


ನಂತರದಲ್ಲಿ ತಿರುವನಂತಪುರಂಗೆ ವಿಮಾನದ ಮೂಲಕ ತೆರಳಿದ ನವೀನ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -
spot_img

Latest News

error: Content is protected !!