Friday, May 3, 2024
Homeತಾಜಾ ಸುದ್ದಿಶನಿವಾರದ ನಿತ್ಯ ಪಂಚಾಂಗ ಮತ್ತು ರಾಶಿಫಲ: ಜನವರಿ-30,2021

ಶನಿವಾರದ ನಿತ್ಯ ಪಂಚಾಂಗ ಮತ್ತು ರಾಶಿಫಲ: ಜನವರಿ-30,2021

spot_img
- Advertisement -
- Advertisement -

ಸೂರ್ಯೋದಯ: 06:45AM, ಸೂರ್ಯಸ್ತ: 06:18 PM
ಶಾರ್ವರೀ ನಾಮ ಸಂವತ್ಸರ
ಪುಷ್ಯ ಮಾಸ
ಕೃಷ್ಣ ಪಕ್ಷ
ಹೇಮಂತ ಋತು
ಉತ್ತರಾಯಣ
ತಿಥಿ: ಬಿದಿಗೆ ( 22:12 )
ನಕ್ಷತ್ರ: ಮಘ ( 26:27 )
ಯೋಗ: ಸೌಭಾಗ್ಯ ( 15:07 )
ಕರಣ: ತೈತಲೆ ( 11:00 )
ಗರಜ ( 22:12 )
ರಾಹು ಕಾಲ: 09:00 – 10:30
ಯಮಗಂಡ: 01:30 – 03:00

ಮೇಷ ರಾಶಿ
ಕುಟುಂಬದ ಜೊತೆಗೆ ಪ್ರವಾಸದ ಚಿಂತನೆ ನಡೆಸಲಿದ್ದೀರಿ. ಅನಿರೀಕ್ಷಿತವಾಗಿ ಧನಲಾಭವಾಗುವ ಸಾಧ್ಯತೆ ಕಂಡುಬರುತ್ತದೆ. ತಮ್ಮ ಯೋಜನೆಗಳು ವಿಳಂಬವಾಗುವುದು. ಗ್ರಹ ಕಟ್ಟಡ ನಿವೇಶನ ಖರೀದಿ ವಕ್ರದೃಷ್ಟಿಯಿಂದ ಮುಂದೂಡುವುದು. ಶತ್ರು ಭಾದೆ ನಿಮ್ಮನ್ನು ಸದಾ ಕಾಡುತ್ತಿದೆ ಆದಷ್ಟು ದೂರವಿರಿ.ಮಹತ್ವದ ಯೋಜನೆ ಇಂದು ಸಾಕಾರ ವಾಗಲಿದೆ. ನೀವು ವಾಗ್ದಾನ ನೀಡುವಾಗ ನಿಮ್ಮ ಪರಿಧಿಯನ್ನು ಮೀರದಿರಿ. ಹಣಕಾಸಿನ ಲಾಭದಿಂದ ಹೊಸ ಆಲೋಚನೆ ಹೊಸ ಹುರುಪು ಮೂಡಲಿದೆ.

ವೃಷಭ ರಾಶಿ
ಯಾರೋ ಮಾಡಿರುವಂತಹ ಅಪವಾದಕ್ಕೆ ಗುರಿಯಾಗುವ ಸಾಧ್ಯತೆ ಇದೆ. ತಮ್ಮ ಕುಟುಂಬ ಸದಸ್ಯರ ಮೇಲೆ ಮಧ್ಯಸ್ಥಿಕೆ ಜನಗಳಿಂದ ಕಿರಿಕಿರಿ ಸೃಷ್ಟಿಯಾಗುವುದು. ನಿಮ್ಮ ಉನ್ನತ ಮಟ್ಟದ ಸಾಧನೆ ಜನಮನ್ನಣೆಗಳಿಸುತ್ತಿದೆ. ಸಾಮಾಜಿಕ ಬದ್ಧತೆ ಹಾಗೂ ಹಣಕಾಸಿನ ಸ್ಥಿತಿ ಇಂದು ಉತ್ಕೃಷ್ಟವಾಗಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ಸಿಗಲಿದೆ. ಕುಟುಂಬದಲ್ಲಿನ ಹಳೆಯ ವ್ಯಾಜ್ಯಗಳು ಬಗೆಹರಿಯಲಿವೆ.

ಮಿಥುನ ರಾಶಿ
ಮನೆ ಕಟ್ಟುವುದು ಅರ್ಧಕ್ಕೆ ನಿಲ್ಲುವುದು. ಕೆಲಸಗಾರರು ಪದೇಪದೇ ಗೈರುಹಾಜರಿ ಆಗುವರು. ಪ್ರೀತಿ-ಪ್ರೇಮ ಸರಸ-ಸಲ್ಲಾಪಗಳಲ್ಲಿ ಮನನೊಂದುವಿರಿ. ನಿಮ್ಮ ಮನಸ್ಸು ನಿಮ್ಮಲ್ಲಿ ಸ್ಥಿರತೆ ಇರುವುದಿಲ್ಲ. ವಿದ್ಯಾರ್ಥಿಗಳು ಓದು ಬರಹದಲ್ಲಿ ಹಿನ್ನಡೆ ಅನುಭವಿಸುವರು. ಕೌಟುಂಬಿಕ ಸಮಸ್ಯೆಗಳನ್ನು ಇಂದು ನೀವು ಇತ್ಯರ್ಥ ಪಡಿಸಲು ವಿಶೇಷ ಕಾಳಜಿ ವಹಿಸುತ್ತೀರಿ. ಕೆಲವರು ಸಮಸ್ಯೆಗಳನ್ನು ತೆಗೆದುಕೊಂಡು ಪರಿಹಾರಕ್ಕಾಗಿ ನಿಮ್ಮ ಬಳಿ ಬರುವ ಸಾಧ್ಯತೆ ಇದೆ. ಗಣ್ಯ ವ್ಯಕ್ತಿಗಳ ಬೇಟಿ ಮಾಡುವಿರಿ. ಮುಂದಿನ ದಿನಗಳಲ್ಲಿ ನಿಮ್ಮ ಕಾರ್ಯಕ್ರಮಗಳಿಗೆ ಇಂದೇ ರೂಪರೇಷೆ ಮಾಡಿಕೊಳ್ಳುವ ಚಿಂತನೆ ನಿಮ್ಮದು.

ಕರ್ಕಾಟಕ ರಾಶಿ
ಪೋಷಕರು ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುವಿರಿ. ಹಿರಿಯರ ಕಡೆಯಿಂದ ಯಾವುದೇ ತರಹದ ಸಹಾಯ-ಸಹಕಾರ ಸಿಗುವುದಿಲ್ಲ. ನೀವು ನಿಮ್ಮ ಕುಟುಂಬದ ಸದಸ್ಯರ ಬಗ್ಗೆ ಚಿಂತನೆ ಮಾಡುವಿರಿ. ತಮ್ಮ ಮನಸ್ಸಿನಲ್ಲಿ ನೂರೆಂಟು ಯೋಚನೆಗಳು ಹರಿದಾಡುತ್ತವೆ, ಆದರೆ ಪ್ರಯೋಜನಕಾರಿ ಆಗುವುದಿಲ್ಲ. ಗೃಹ ಅಲಂಕಾರಕ್ಕೆ ವಿಶೇಷ ಗಮನ ಹರಿಸುತ್ತೀರಿ. ಪತ್ನಿಯ ಜೊತೆಗೆ ವಸ್ತುಗಳ ಖರೀದಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತೀರಿ. ಬಂದು ವರ್ಗದೊಡನೆ ಆಸ್ತಿ ಹಣಕಾಸಿಗಾಗಿ ವ್ಯಾಜ್ಯಗಳು ಸೃಷ್ಟಿಯಾಗಬಹುದು. ವೈಯಕ್ತಿಕ ಸಮಸ್ಯೆಗಳನ್ನು ಕೆಲಸ ಕಾರ್ಯದಲ್ಲಿ ತರಬೇಡಿ.

ಸಿಂಹ ರಾಶಿ
ಪ್ರೇಮದಲ್ಲಿ ವಿರಹ ಅನುಭವಿಸುವಿರಿ. ಜಮೀನಿಗೆ ಸಂಬಂಧಿಸಿದ ಕಚೇರಿ ಕೆಲಸಗಳು ಒಬ್ಬ ವ್ಯಕ್ತಿಯಿಂದ ವಿಳಂಬವಾಗುವ ಸಾಧ್ಯತೆ ಇದೆ. ಉದ್ಯೋಗ ಹುಡುಕುವುದರಲ್ಲಿ ಕಾಲ ಕಳೆಯುವಿರಿ. ತಾವು ಸರಕಾರ ಕೆಲಸಕ್ಕೆ ಎಷ್ಟೇ ಸ್ಪರ್ಧಾತ್ಮಕ ಪರೀಕ್ಷೆ ಬರೆದರು ಕೂಡ ಯಶಸ್ವಿ ಕಾಣುವುದು ವಿಳಂಬವಾಗುವುದು. ಮಾನಸಿಕ ಕಿರಿಕಿರಿ ನಿಮಗೆ ಹೆಚ್ಚು ಆಗಬಹುದು. ಯೋಜನೆಗಳಲ್ಲಿ ವಿಳಂಬ ಧೋರಣೆ. ಮನೆ ಮತ್ತು ಉದ್ಯೋಗ ಎರಡನ್ನೂ ನಿರ್ವಹಿಸುವುದನ್ನು ಕಲಿಯಬೇಕಿದೆ. ನಿಮ್ಮ ಸಂಗಾತಿ ಪ್ರಣಯದಲ್ಲಿ ಆಸಕ್ತಿ ತೋರುವರು ಸಿಹಿಯಾದ ಪ್ರೇಮ ಬಾಂಧವ್ಯ ನಿಮ್ಮದಾಗುತ್ತದೆ.

ಕನ್ಯಾ ರಾಶಿ
ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದ ವಿಷಯದಲ್ಲಿ ಸಹೋದರ-ಸಹೋದರಿಯರ ಕಡೆಯಿಂದ ಬೇಸರ ಮತ್ತು ವೈರಾಗ್ಯ ಸೃಷ್ಟಿಯಾಗುವುದು. ಪತ್ನಿಯ ಸಹಾಯದಿಂದ ಹಣಕಾಸಿನ ಸಮಸ್ಯೆ ಪರಿಹಾರ ಸಿಗಲಿದೆ. ನೂತನ ಗೃಹ ಕಟ್ಟಡ ಪ್ರಾರಂಭದ ಬಗ್ಗೆ ಚಿಂತನೆ ಮಾಡುವಿರಿ. ಹೊಸ ನಿವೇಶನ ಖರೀದಿಸುವ ಚಿಂತನೆ ಯಶಸ್ವಿಯಾಗಲಿದೆ. ಮಕ್ಕಳ ಚಟುವಟಿಕೆಯಲ್ಲಿ ನೀವು ಸಹ ಅವರೊಡನೆ ಕೂಡಿ ಕೊಳ್ಳಿ ಇದರಿಂದ ಮಕ್ಕಳಲ್ಲಿ ವಿಶೇಷ ಜ್ಞಾನ ವೃದ್ಧಿಯಾಗುತ್ತದೆ, ನಿಮ್ಮಲ್ಲಿ ಚೈತನ್ಯ ತುಂಬುತ್ತದೆ. ಇಂದು ಚಿನ್ನಾಭರಣ ವಸ್ತುಗಳ ಖರೀದಿಗೆ ಆದ್ಯತೆ ನೀಡುವಿರಿ. ಅಡಮಾನ ಸಾಲವನ್ನು ತೀರಿಸುವ ಬಯಕೆ ಮೂಡಬಹುದು.

ತುಲಾ ರಾಶಿ
ಸುವರ್ಣ ಖರೀದಿಸುವ ಚಿಂತನೆ ಮಾಡುವಿರಿ. ಸಂಗಾತಿಯೊಡನೆ ವಿರಸವಾಗಿ ಏಕಾಂಗಿತನ ಅನುಭವಿಸುವಿರಿ. ಕೃಷಿಕರಿಗೆ ಧನಲಾಭವಿದೆ. ಜಮೀನಲ್ಲಿ ಹೊಸ ಪ್ರಯೋಗ ಮಾಡುವ ಚಿಂತನೆ ಮಾಡುವಿರಿ. ಹನಿ ನೀರಿನ ವ್ಯವಸಾಯ ಮಾಡುವ ಬಗ್ಗೆ ಕೂಡ ಚಿಂತನೆ ಮಾಡುವಿರಿ. ಸಾಮಾಜಿಕ ಮತ್ತು ರಾಜಕೀಯವಾಗಿ ಹೆಚ್ಚು ಬೆಳವಣಿಗೆ ಕಾಣಬಹುದು. ಇಂದು ಪ್ರಯಾಣವು ಸಹ ನಿಮಗೆ ಲಾಭವನ್ನು ತಂದು ಕೊಡುತ್ತದೆ. ಉದ್ಯೋಗ ರಂಗದಲ್ಲಿ ಹೊಸ ಅವಕಾಶಗಳು ನಿಮಗೆ ಸಿಗಲಿದೆ. ಆರ್ಥಿಕ ವ್ಯವಹಾರದಲ್ಲಿ ಉತ್ತಮವಾದ ದಿನವಿದು. ದಾಂಪತ್ಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಅತಿ ಮುಖ್ಯ.

ವೃಶ್ಚಿಕ ರಾಶಿ
ಹಣ್ಣು ಹಂಪಲು ಗಿಡಗಳ ವ್ಯವಸಾಯ ಮಾಡುವ ಚಿಂತನೆ ಯಶಸ್ಸಿನತ್ತ ಸಾಗುವುದು. ಹೈನುಗಾರಿಕೆ ಕೆಲಸ ಸಂಪೂರ್ಣ ಮಾಡುವಿರಿ. ಕುರಿ ಸಾಕಾಣಿಕೆ, ಕೋಳಿ ಫಾರಂ ಹೊಸ ಉದ್ಯಮ ಪ್ರಾರಂಭ ಮಾಡುವಿರಿ. ನಾಲ್ಕು ಚಕ್ರದ ವಾಹನ ಖರೀದಿಸುವ ಚಿಂತನೆ ಮಾಡುವಿರಿ. ನಿವೇಶನದಲ್ಲಿ ಮನೆ ಕಟ್ಟಲು ತುಂಬಾ ಅನುಕೂಲ ಇರುತ್ತದೆ. ನಿಗದಿತ ಸಮಯಕ್ಕಿಂತ ಮೊದಲೇ ಕೆಲಸವನ್ನು ಮುಗಿಸುವ ಇಂದು ನೀವು ಬಹಳಷ್ಟು ಖುಷಿಯಾಗಿರುವಿರಿ. ಹಣಕಾಸಿನ ಸ್ಥಿತಿಯು ಆದಾಯ ಬಂದರೂ ಸಹ ಉಳಿತಾಯಕ್ಕೆ ಆದ್ಯತೆ ನೀಡಿ. ನಿಮ್ಮಲ್ಲಿನ ವ್ಯಕ್ತಿತ್ವ ಹಾಗೂ ನಗುವಿನ ಮಾತುಗಳಿಂದ ಎಲ್ಲವನ್ನು ಪ್ರೇಮಮಯವಾಗಿ ಮಾಡುವ ಶಕ್ತಿ ನಿಮ್ಮಲ್ಲಿದೆ.

ಧನಸ್ಸು ರಾಶಿ
ಅರ್ಧದಲ್ಲಿ ಕಟ್ಟಿರುವ ಮನೆಯ ಕೆಲಸ ಬೇಗನೆ ಸಂಪೂರ್ಣ ಮಾಡುವಿರಿ. ಆಸ್ತಿ ವಿಚಾರದಲ್ಲಿ ವಿಳಂಬವಾಗುವುದು. ತಮ್ಮ ಚಂಚಲ ಮನಸ್ಸಿನಿಂದ, ತೊಂದರೆಯಾಗುವುದು. ಉದ್ಯೋಗ ಹುಡುಕಾಟದಲ್ಲಿ, ವಿಳಂಬವಾಗುವುದು. ನವದಂಪತಿಗಳು ಸಂತಾನದ, ಸಿಹಿಸುದ್ದಿ ಕೇಳುವಿರಿ. ಹಳೆಯ ಬಾಕಿ ಕೆಲಸ ಇಂದು ಮುಕ್ತಾಯ ಮಾಡಲಿದ್ದೀರಿ. ನಿಮ್ಮ ವ್ಯಕ್ತಿತ್ವಕ್ಕೆ ಪ್ರಾಮಾಣಿಕತೆಯು ಹಿರಿಮೆ ತಂದುಕೊಡುತ್ತದೆ. ನಿಮ್ಮ ಪ್ರೀತಿಯ ಮಡದಿಗಾಗಿ ಇಂದು ನೀವು ಬಹಳಷ್ಟು ಸಮಯ ನೀಡುವಿರಿ. ಹಾಗೆಯೇ ಅವರನ್ನು ಸಂತೋಷ ಪಡಿಸುವ ಕೆಲಸ ಮಾಡುತ್ತಿರಿ.

ಮಕರ ರಾಶಿ
ವಿದೇಶಕ್ಕೆ ಹೊರಡುವ, ಯೋಚನೆ ಯಶಸ್ವಿಯಾಗುವುದು. ಹಿರಿಯರ ವಂಶಸ್ಥರಿಂದ, ತಮಗೆ ಬರಬೇಕಾದ ಆಸ್ತಿ, ವಿಳಂಬವಾಗುವುದು. ನಿವೇಶನ ಮಾರಾಟ ಮತ್ತು ನಿವೇಶನ ಖರೀದಿ ಮಾಡುವವರಿಗೆ ಉತ್ತಮ ದಿನ. ತಮ್ಮ ವ್ಯಾಪಾರ ಮಂದಗತಿಯಲ್ಲಿ ಸಾಗುತ್ತದೆ. ತಮ್ಮ ಅಕ್ಕ ಪಕ್ಕದವರ ಕಡೆಯಿಂದ ಜಾಗೃತಿವಹಿಸಿ. ಕೆಲಸದಲ್ಲಿನ ಶ್ರದ್ಧೆ ಹಾಗೂ ಪರಿಶ್ರಮ ನಿಮ್ಮನ್ನು ದೊಡ್ಡ ಸ್ಥಾನದಲ್ಲಿ ಇರಿಸುತ್ತದೆ. ಅಧಿಕಾರಿಗಳು ಮತ್ತು ನಿಮ್ಮ ನಡುವೆ ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯ ಬರುವುದು. ನಿಮ್ಮ ವೈಯಕ್ತಿಕ ವಿಷಯದಲ್ಲಿ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ತಡೆಗಟ್ಟಿರಿ. ಅನಿರೀಕ್ಷಿತ ಹೊಸ ಯೋಜನೆಯೂ ಹೊಸತನದತ್ತ ಕೊಂಡೊಯ್ಯಲಿದೆ. ವ್ಯಾಪಾರಸ್ಥರು ಹಣಕಾಸಿನ ವಿಷಯದಲ್ಲಿ ಎಚ್ಚರವಿರಲಿ.

ಕುಂಭ ರಾಶಿ
ಆರ್ಥಿಕ ಸ್ಥಿತಿಗತಿಗಳ ಅರಿತು ಹೆಜ್ಜೆ ಮುಂದಿಡಬೇಕು. ತಮ್ಮ ಮನಸ್ಸು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು. ಸಾಲಗಾರರಿಂದ ಮನಸ್ತಾಪವಾಗುವ ಸಾಧ್ಯತೆ ಇದೆ. ನೀವು ಹರಿತವಾದ ಮಾತುಗಳನ್ನಾಡದೇ ಸಮಾಧಾನವಾಗಿದ್ದರೆ ಒಳಿತು. ಅಕ್ಕಪಕ್ಕ ಮನೆಯವರ ಜನರ ವಕ್ರದೃಷ್ಟಿಗೆ ಬಲಿಯಾಗುವರಿ. ಕಣ್ಣಿಂದ ನೋಡಿದರು ಸುಮ್ಮನೆ ಇದ್ದರೆ ಒಳಿತು. ವಿದ್ಯಾರ್ಥಿಗಳಿಗೆ ಅವರ ವಿದ್ಯಾಭ್ಯಾಸದ ಕಡೆಗೆ ಹುರಿದುಂಬಿಸಿ. ಕೆಲವು ಗುಪ್ತ ಸಂಗತಿಗಳನ್ನು ಯಾರ ಜೊತೆಗೂ ಹಂಚಿಕೊಳ್ಳದಿರಿ. ಇಂದು ನೀವು ಪ್ರೇಮಾಂಕುರದಲ್ಲಿ ಬೀಳಲಿದ್ದಿರಿ ಅದರಲ್ಲಿ ಶುಭ ಫಲಿತಾಂಶ ಬರಲಿದೆ. ಇಂದು ದೂರದ ಪ್ರಯಾಣವನ್ನು ನಿಷೇಧಿಸಿ.

ಮೀನಾ ರಾಶಿ
ಈ ದಿನ ಬಹುದೊಡ್ಡ ಕೆಲಸ ಕಾರ್ಯಗಳಲ್ಲಿ ಯಶಸ್ವಿಯಾಗುವಿರಿ. ಕುಟುಂಬದ ಜನಗಳಿಂದ ಅತೀರೇಕ ವರ್ತನೆಯಿಂದ ಹಿಂಸೆ ಆಗುವುದು. ಹಣಕಾಸಿನ ವ್ಯವಹಾರ ಬಿಕ್ಕಟ್ಟಿನ ಪರಿಣಾಮ ಕಂಡುಬರುತ್ತದೆ. ಹೆಂಡತಿಯೊಂದಿಗೆ ಮನಸ್ತಾಪ ಆಗುವ ಸಂಬಂದ ಹೆಚ್ಚಾಗಿ ಮಾತಾನಾಡಬಾರದು. ವೈ ಮನಸ್ಸಿನಿಂದ ಮಾನಸಿಕ ಅಶಾಂತಿ. ವೈಜ್ಞಾನಿಕ ಸಂಶೋಧಕರಿಗೆ ಕುತೂಹಲದ ವಾತಾವರಣ. ನಿಮ್ಮಲ್ಲಿನ ಸೋಮಾರಿತನದಿಂದ ಕೆಲಸದಲ್ಲಿ ನಷ್ಟ ಹಾಗೂ ಇತರರಿಂದ ಸಮಸ್ಯೆಗಳು ಬರಬಹುದು. ಸಂಘ ಸಹವಾಸದಲ್ಲಿ ಉತ್ತಮರನ್ನು ಮಾತ್ರ ಪಡೆಯಿರಿ. ಕೆಲವು ಜನರ ಸಹಕಾರದಿಂದ ಹಣಕಾಸಿನ ಸ್ಥಿತಿ ಯಲ್ಲಿ ಪ್ರಯೋಜನವಾಗುತ್ತದೆ. ಆದಷ್ಟು ಮೋಜು ಮಸ್ತಿ ಕೂಟಗಳಿಂದ ಆಗುವ ವೆಚ್ಚವನ್ನು ತಡೆಗಟ್ಟಿರಿ.

- Advertisement -
spot_img

Latest News

error: Content is protected !!