ಬೆಂಗಳೂರು : ಬೆಂಗಳೂರಿನ ಬೆಂಗಳೂರಿನ ಬೊಮ್ಮನಹಳ್ಳಿಯ 28 ವರ್ಷದ ಯುವತಿಗೆ ಸೆಪ್ಟೆಂಬರ್ 3ರಂದು ಕೋವಿಡ್ ಸೋಂಕು ತಗುಲಿತ್ತು. ಹಾಗಾಗಿ ಚಿಕಿತ್ಸೆಗೆಂದು ಕೋವಿಡ್ ಕರ್ತವ್ಯದಲ್ಲಿರುವ ಅಂಬ್ಯುಲೆನ್ಸ್ ಎಂದು ಸ್ಟಿಕ್ಕರ್ ಹಾಕಿದ್ದ ಅಂಬ್ಯುಲೆನ್ಸ್ನಲ್ಲಿ ಯುವತಿಯನ್ನು ಕರೆದುಕೊಂಡು ಹೋಗಲಾಗಿತ್ತು.
ಆದರೆ ಆ ಬಳಿಕ ಆಕೆಯನ್ನು ನೋಡೋದಕ್ಕೆ ಅಂತಾ ಸಮೀಪದ ಸಮೀಪದ ಖಾಸಗಿ ಆಸ್ಪತ್ರೆಗೆ ಹೋದ ಕುಟುಂಬದವರಿಗೆ ಆಘಾತ ಕಾದಿತ್ತು. ಯುವತಿ ಆಸ್ಪತ್ರೆಗೆ ದಾಖಲಾಗಿರಲಿಲ್ಲ. ಬಿಬಿಎಂಪಿ ಅಧಿಕಾರಿಗಳನ್ನು ವಿಚಾರಿಸಿದರೆ ಈ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದರು. ಹೀಗಾಗಿ ಕುಟುಂಬದವರು ಪೊಲೀಸರ ಮೊರೆ ಹೋಗಿದ್ದರು. ಇದೀಗ ಆ ಯುವತಿ ದೆಹಲಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇನ್ನು ಈ ಬಗ್ಗೆ ಬಿಬಿಎಂಪಿ ಅವರನ್ನು ಕೇಳಿದ್ರೆ ಅವರು ಬೇರೇನೇ ಹೇಳುತ್ತಿದ್ದಾರೆ. ಕೋವಿಡ್ ಖಚಿತವಾದ ರೋಗಿಗೆ ನಾವು ಮೊದಲು ಎಸ್ಎಂಎಸ್ ಕಳಿಸುತ್ತೇವೆ. ಅವರನ್ನು ಕರೆದುಕೊಂಡು ಹೋಗಲು ಅಂಬ್ಯುಲೆನ್ಸ್ ಬರುವ ಒಂದು ಗಂಟೆ ಮೊದಲು ಅಂಬ್ಯುಲೆನ್ಸ್ ಚಾಲಕನ ಹೆಸರು, ನಂಬರ್ ಕಳಿಸಲಾಗುತ್ತದೆ ಎಂದು ಹೇಳಿದ್ದಾರೆ.
ಯುವತಿ ಕುಟುಂದವರ ಪ್ರಕಾರ ಆಕೆಯ ಮೊಬೈಲ್ಗೆ ಯಾವುದೇ ಎಸ್ಎಂಎಸ್ ಬಂದಿಲ್ಲ. ಆದರೆ, ಪಿಪಿಇ ಕಿಟ್ ಧರಿಸಿದ್ದ ಇಬ್ಬರು ಆಕೆಯನ್ನು ಬಂದು ಕರೆದುಕೊಂಡು ಹೋಗಿದ್ದಾರೆ. ಕೆಲವು ಜೊತೆ ಬಟ್ಟೆ, 00 ರೂ. ಜೊತೆ ಆಕೆ ಅಂಬ್ಯುಲೆನ್ಸ್ ಹತ್ತಿದ್ದಾಳೆ.
ಆಗ್ನೇಯ ವಿಭಾಗದ ಡಿಸಿಪಿ ಜೋಶಿ ಶ್ರೀನಾಥ್ ಮಹಾದೇವ್ ಈ ಪ್ರಕರಣದ ಕುರಿತು ಹೇಳಿಕೆ ನೀಡಿದ್ದಾರೆ. “ಯುವತಿ ದೆಹಲಿಯಲ್ಲಿ ಪತ್ತೆಯಾಗಿದ್ದಾಳೆ. ಬಲವಂತದಿಂದ ಯಾರೂ ಕರೆದುಕೊಂಡು ಬಂದಿಲ್ಲ ಎಂದು ಹೇಳಿಕೆ ನೀಡಿದ್ದಾಳೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ” ಎಂದು ಹೇಳಿದ್ದಾರೆ.