- Advertisement -
- Advertisement -
ಚಿಕ್ಕಮಗಳೂರು:ಇಲ್ಲಿನ ಶೃಂಗೇರಿ ತಾಲ್ಲೂಕಿನ ಗ್ರಾಮವೊಂದರಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಮೇಲೆ 30 ಕ್ಕೂ ಅಧಿಕ ಮಂದಿ ಅತ್ಯಾಚಾರ ಎಸಗಿದ ಆರೋಪ ವರದಿಯಾಗಿದೆ.ತಾಯಿ ನಿಧನರಾಗಿದ್ದು ಈ ಹುಡುಗಿಯನ್ನು ಚಿಕ್ಕಮ್ಮಕರೆತಂದಿದ್ದರು. ವಿದ್ಯಾರ್ಥಿನಿ ಅವರೊಂದಿಗೆ ವಾಸವಿದ್ದಾಗ 2020 ರ ಸೆಪ್ಟೆಂಬರ್ ನಿಂದ ಮೂವತ್ತಕ್ಕೂ ಅಧಿಕ ಮಂದಿ ಆಕೆ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.ತನಿಖೆ ನಡೆಯುತ್ತಿದ್ದು ಆಕೆಯನ್ನು ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ.
ವ್ಯಕ್ತಿಯೊಬ್ಬ ಆಕೆಯ ಮೇಲೆ ಅತ್ಯಾಚಾರವೆಸಗಿ ದೃಶ್ಯಗಳನ್ನು ಮೊಬೈಲ್ನಲ್ಲಿ ಸೆರೆಹಿಡಿದುಕೊಂಡಿದ್ದಾನೆ. ನಂತರದಲ್ಲಿ ವಿಡಿಯೋ ತೋರಿಸಿ ಬ್ಲಾಕ್ಮೇಲ್ ಮಾಡಿ ಪದೇಪದೇ ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ, ತನ್ನ ಸ್ನೇಹಿತರು ಮತ್ತು ಪರಿಚಿತರನ್ನು ಬಾಲಕಿ ಮೇಲೆ ಅತ್ಯಾಚಾರ ಎಸಗಲು ಸಹಕಾರ ನೀಡಿದ್ದಾನೆ.
- Advertisement -