- Advertisement -
- Advertisement -
ಮುಂಬಯಿ: ಇಲ್ಲಿನ ಭಾಯಂದರ್ ನಲ್ಲಿ ಇಬ್ಬರು ವ್ಯಕ್ತಿಗಳು 2 ಕೆಜಿ ಚರಸ್ ಸಾಗಿಸುತ್ತಿದ್ದವೇಳೆ ಮಾದಕವಸ್ತು ನಿಯಂತ್ರಣ ದಳವು (ಎನ್ಸಿಬಿ) ಬಂಧಿಸಿದೆ ಎಂದು ವರದಿಯಾಗಿದೆ.
ಭಾಯಂದರ್ ಪೂರ್ವದ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಬಸ್ ನಿಲ್ದಾಣದ ಬಳಿ ಆರೋಪಿ ಅವಿನಾಶ್ ಸಿಂಗ್ ನನ್ನು (24) ಬಂಧಿಸಲಾಗಿದೆ. ಈ ವ್ಯಕ್ತಿ ತನ್ನ ಚೀಲದಲ್ಲಿ 2.04 ಕೆಜಿ ಚರಸ್ ಸಾಗಿಸುತ್ತಿರುವುದು ಪತ್ತೆಯಾಗಿದೆ ಎಂದು ಎನ್ಸಿಬಿ ಅಧಿಕಾರಿ ಹೇಳಿದ್ದಾರೆ.ನಂತರದಲ್ಲಿ ಎನ್ಸಿಬಿ ತಂಡವು ನಲಸೋಪಾರದ ಮನೆಯೊಂದರ ಮೇಲೆ ದಾಳಿ ನಡೆಸಿ ಶ್ರವಣ್ ಗುಪ್ತಾ (38) ಎಂಬ ಇನ್ನೋರ್ವ ಆರೋಪಿಯನ್ನು ಬಂಧಿಸಿದೆ.
- Advertisement -