- Advertisement -
- Advertisement -
ಉಡುಪಿ: ಅಂಗಡಿಯೊಂದರಿಂದ ನಗದು ಹಾಗೂ ಸಿಸಿ ಕ್ಯಾಮರಾವನ್ನು ಕಳವುಗೈದ ಘಟನೆ ನಾಲ್ಕೂರು ಗ್ರಾಮದ ಹಾಲೆಮಜಲು ಎಂಬಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ಹಾಲೆಮಜಲಿನಲ್ಲಿರುವ ಸುಪ್ರೀತ್ ಗುಡ್ಡೆಮನೆಯವರ ಪ್ರಗತಿ ಚಿಕನ್ ಸೆಂಟರ್ ನಲ್ಲಿ ನಿನ್ನೆ ತಡರಾತ್ರಿ ಕಳ್ಳರು ಅಂಗಡಿಯ ಬೀಗ ಮುರಿದು ಒಳನುಗ್ಗಿದ್ದು, ನಗದು ಹಾಗೂ ಸಿಸಿ ಕ್ಯಾಮರ ಕೊಂಡೊಯ್ದಿದ್ದಾರೆ. ಅಂಗಡಿ ಮಾಲಕ ಸುಪ್ರೀತ್ ರವರು ಮುಂಜಾನೆ ಅಂಗಡಿಗೆ ಬಂದ ಸಮಯದಲ್ಲಿ ಈ ವಿಷಯ ತಿಳಿದುಬಂದಿದೆ.
- Advertisement -