- Advertisement -
- Advertisement -
ಉತ್ತರಕನ್ನಡ: ನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದ ರಸ್ತೆಯಲ್ಲಿ ನಿಂತಿದ ವ್ಯಕ್ತಿಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ವ್ಯಕ್ತಿಗೆ ತೀವ್ರ ಗಾಯಗಳಾಗಿವೆ. ಈ ಘಟನೆ ನಗರ ಚಾಪೇಲ್ ವಾರ್ ಶಿಫ್ ಮ್ಯೂಸಿಯಂ ಬಳಿ ಇಂದು ಸಂಭವಿಸಿದೆ.
ಗಾಯಗೊಂಡ ವ್ಯಕ್ತಿಯನ್ನು ಕಾರವಾರದ ಮಂಜುನಾಥ ರುದ್ರಮುನಿ ಮಠದ ಎಂದು ಗುರುತಿಸಲಾಗಿದೆ. ಇವರು ಗುಪ್ತ ವಾರ್ತೆ ವಿಭಾಗದಲ್ಲಿ ಪೊಲೀಸ್ ಉಪನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ತಮ್ಮ ಸೈಕಲ್ ರಸ್ತೆ ಪಕ್ಕದಲ್ಲಿ ನಿಲ್ಲಿಸಿ ನಿಂತಿದ್ದಾಗ ಅತಿವೇಗವಾಗಿ, ನಿರ್ಲಕ್ಷ್ಯತನದಿಂದ ರಾಷ್ಟ್ರೀಯ ಹೆದ್ದಾರಿಯ ಮೂಲಕ ಬಂದ ಕಾರು ಮಂಜುನಾಥ ಅವರಿಗೆ ಡಿಕ್ಕಿ ಹೊಡೆದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಕಾಸರಗೋಡ ಮೂಲದ ಸಕ್ರಿಯಾ ಅಬ್ದುಲ್ ಸಲಾಂ ಎನ್ನುವವನ ವಿರುದ್ಧ ಪ್ರಕರಣ ದಾಖಲಾಗಿದೆ.
- Advertisement -