- Advertisement -
- Advertisement -
ಬೆಂಗಳೂರು:ನಿನ್ನೆ ಸಾರಿಗೆ ನೌಕರರು ಮತ್ತು ಸಾರಿಗೆ ಸಚಿವರ ಜತೆ ನಡೆಸಿದ ಸಂಧಾನ ವಿಫಲವಾಗಿದ್ದು,ಮುಷ್ಕರ ಮುಂದುವರಿದಿದೆ. ನಮ್ಮನ್ನು ಸರ್ಕಾರ ರಾಜ್ಯ ಸರ್ಕಾರ ಸರ್ಕಾರಿ ನೌಕರರು ಅಂತ ಪರಿಗಣನೆ ಮಾಡಲೇಬೇಕು ಅಲ್ಲಿ ತನಕ ನಮ್ಮ ಹೋರಾಟ ನಡೆಯಲಿದೆ ಎಂದು ಸಾರಿಗೆ ನೌಕರರು ಪಟ್ಟು ಹಿಡಿದಿದ್ದಾರೆ.ಮಂಗಳೂರು, ಕಲಬುರಗಿ, ಬೆಳಗಾವಿ, ಉಡುಪಿ ಜಿಲ್ಲೆಗಳಲ್ಲೂ ಬಂದ್ ಕಾವು ಏರಿದೆ.
ರಾಜ್ಯದ್ಯಂತ ಬೇರೆ ಬೇರೆ ಸ್ಥಳಗಳಿಗೆ ಕೆಲಸಕ್ಕೆ ಹೋಗಲು ಬಸ್ ನಿಲ್ದಾಣಕ್ಕೆ ಬರುತ್ತಿರುವ ಪ್ರಯಾಣಿಕರು ಬಸ್ಸಿಲ್ಲದೇ ಕಂಗಾಲಾಗಿದ್ದಾರೆ.ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ನಿಲ್ದಾಣ ಸಂಪೂರ್ಣ ನಿಸ್ತೇಜವಾಗಿದೆ.
- Advertisement -