- Advertisement -
- Advertisement -
ಶ್ರೀನಗರ: ಇಲ್ಲಿನ ಪೂಂಚ್ ಸೆಕ್ಟರ್ ಬಳಿಯ ದುಗ್ರಾನ್ ಪೋಶಾನ್ ಪ್ರದೇಶದಲ್ಲಿ ಇಬ್ಬರು ಭಯೋತ್ಪಾದಕರನ್ನು ಸೇನಾಪಡೆ ಹತ್ಯೆನಡೆಸಿದ್ದಾರೆ.ಇದೇವೇಳೆ ಚಟ್ಟಪಾನಿ- ದುಗ್ರಾನ್ ಗ್ರಾಮದಲ್ಲಿ ಓರ್ವನನ್ನು ಬಂಧಿಸಲಾಗಿದೆ ಎಂದು ಜಮ್ಮು ಕಾಶ್ಮೀರ ಪೊಲೀಸರು ಹೇಳಿಕೆ ನೀಡಿದ್ದಾರೆ.ಕಾರ್ಯಾಚರಣೆಯಲ್ಲಿ ಜಮ್ಮು ಕಾಶ್ಮೀರ ಪೊಲೀಸರು ಹಾಗೂ ಭಾರತೀಯ ಸೇನೆ ಜಂಟಿಯಾಗಿ ಭಾಗವಹಿಸಿತು.
ಮೃತಪಟ್ಟ ಭಯೋತ್ಪಾದಕರ ಗುರುತು ಪತ್ತೆಯಾಗಿದ್ದು ಸಾಜಿದ್ ಮತ್ತು ಬಿಲಾಲ್ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಕೂಡಾ ಜೈಷ್ ಇ ಮೊಹಮದ್ ಸಂಘಟನೆಗೆ ಸೇರಿದವರಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಎರಡು ಎಕೆ-47 ರೈಫಲ್ಗಳು, ಒಂದು ಯುಬಿಜಿಎಲ್ ಹಾಗೂ ಸ್ಯಾಟ್ಫೋನ್ ವಶಪಡಿಸಲಾಗಿದೆ.
- Advertisement -