ಮಂಗಳೂರು : ಇಲ್ಲಿನ ಕೊಡಿಯಾಲ್ ಬೈಲಿನಲ್ಲಿರುವ ಯೆನೆಪೊಯ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಸಮುದಾಯ ಔಷಧ ವಿಭಾಗ ಯೆನೆಪೋಯ ವೈದ್ಯಕೀಯ ಕಾಲೇಜು, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಶಾಖೆ ಮತ್ತು ಸ್ಥಳೀಯ ವಾರ್ಡ್ ಕಾರ್ಪೊರೇಟರ್ಗಳ ಸಹಕಾರದೊಂದಿಗೆ ರಕ್ತದಾನ ಶಿಬಿರ ನಡೆಯಲಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರ, ಅಝೀಝುದ್ದೀನ್ ರಸ್ತೆ (ವಾರ್ಡ್ ಸಂಖ್ಯೆ 44) ಬಂದರು, ಮಂಗಳೂರು ಇಲ್ಲಿ ಶನಿವಾರ 26, ಮಾರ್ಚ್ 2022 ಬೆಳಿಗ್ಗೆ 09.30 ರಿಂದ ಮಧ್ಯಾಹ್ನ 01.30 ರವರೆಗೆ ರಕ್ತದಾನ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಮಂಗಳೂರಿನ ಪಾಲಿಕೆ ಆಯುಕ್ತರಾದ ಪ್ರೇಮಾನಂದ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಇನ್ನು ಭಾರತೀಯ ರೆಡ್ಕ್ರಾಸ್ ಸಭಾಪತಿ ಸಿ.ಎ.ಶಾಂತಾರಾಮ ಶೆಟ್ಟಿ, ವಾರ್ಡ್ ನಂ 44 ಕಾರ್ಪೊರೇಟರ್ ಶ್ರೀಮತಿ ಝೀನತ್ ಸಂಶುದ್ದೀನ್, ಆರೋಗ್ಯಧಿಕಾರಿ ಡಾ. ಮಂಜಯ್ಯ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ಇನ್ನು ರಕ್ತದಾನಿಗಳ ಕೊಡುಗೆಯನ್ನು ಪ್ರಮಾಣಪತ್ರದೊಂದಿಗೆ ಕೃತಜ್ಞತೆಯಿಂದ ಗುರುತಿಸಲಾಗುತ್ತದೆ ಎಂದು ಆಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಈ ಸಂಖ್ಯೆಯನ್ನು ಸಂಪರ್ಕಿಸಿ
ವಿವರಗಳಿಗಾಗಿ ಸಂಪರ್ಕಿಸಿ: (+91)8861219155(ಮೊಬೈಲ್) ಅಥವಾ 0824-2496800 (ಸ್ಥಿರ ದೂರವಾಣಿ)