Tuesday, May 7, 2024
Homeತಾಜಾ ಸುದ್ದಿ“ಕ್ರಿಸ್ಮಸ್ಗೆ ಚರ್ಚ್ಗೆ ಹೋಗುವ ಹಿಂದೂಗಳಿಗೆ ಥಳಿಸುತ್ತೇವೆ': ವಿವಾದಾತ್ಮಕ ಹೇಳಿಕೆ ನೀಡಿದ ಭಜರಂಗ ದಳದ ನಾಯಕ

“ಕ್ರಿಸ್ಮಸ್ಗೆ ಚರ್ಚ್ಗೆ ಹೋಗುವ ಹಿಂದೂಗಳಿಗೆ ಥಳಿಸುತ್ತೇವೆ’: ವಿವಾದಾತ್ಮಕ ಹೇಳಿಕೆ ನೀಡಿದ ಭಜರಂಗ ದಳದ ನಾಯಕ

spot_img
- Advertisement -
- Advertisement -

ಅಸ್ಸಾಂ: ಪ್ರೇಮಿಗಳ ದಿನಾಚರಣೆಗೆ ವಿರೋಧ ವ್ಯಕ್ತಪಡಿಸುವ ಭಜರಂಗದಳ ನಾಯಕರು ಇದೀಗ ಕ್ರಿಸ್​ಮಸ್​ ದಿನಾಚರಣೆಯ ದಿನದಂದು ಹಿಂದೂಗಳು ಚರ್ಚ್​ಗೆ ಹೋಗುವುದಕ್ಕೂ ವಿರೋಧ ವ್ಯಕ್ತಪಡಿಸಿದ್ದಾರೆ. ಆ ದಿನ ಚರ್ಚ್​ಗೆ ಹೋಗುವ ಹಿಂದೂಗಳನ್ನು ಥಳಿಸುವುದಾಗಿ ಭಜರಂಗದಳ ನಾಯಕರೊಬ್ಬರು ಹೇಳಿದ್ದಾರೆ.

ಈ ರೀತಿಯ ಹೇಳಿಕೆಯನ್ನು ನೀಡುವ ಮೂಲಕ ವಿವಾದಕ್ಕೆ ಬಂದಿರುವವರು ಅಸ್ಸಾಂನ ಕ್ಯಾಚರ್​ ಜಿಲ್ಲೆಯ ಭಜರಂಗದಳದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಿಥು ನಾಥ್ ಅವರು. ಜಿಲ್ಲೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು ಈ ಮಾತನ್ನು ಹೇಳಿದ್ದಾರೆ. ಮೇಘಾಲಯದ ಶಿಲ್ಲಾಂಗ್​ನಲ್ಲಿ ವಿವೇಕಾನಂದರ ಕೇಂದ್ರವನ್ನು ಕ್ರಿಶ್ಚಿಯನ್ನರು ಮುಚ್ಚಿದ್ದಾರೆ. ಇದರಿಂದಾಗಿ ನಮಗೆ ನೋವಾಗಿದೆ. ಹಾಗಾಗಿ ಹಿಂದೂಗಳು ಕ್ರಿಸ್​ಮಸ್​ ದಿನದಂದು ಚರ್ಚ್​ಗೆ ಹೋಗದಂತೆ ತಡೆಯುತ್ತೇವೆ ಎಂದು ಅವರು ಹೇಳಿದ್ದಾರೆ.

ಕ್ರಿಸ್​ಮಸ್​ ದಿನ ಚರ್ಚ್​ಗೆ ಹೋಗುವ ಹಿಂದೂಗಳನ್ನು ನಾವು ಥಳಿಸುತ್ತೇವೆ. ಮಾರನೇ ದಿನ ಅದು ಎಲ್ಲ ಮಾಧ್ಯಮಗಳಲ್ಲಿ ದೊಡ್ಡ ವರದಿಯಾಗುತ್ತದೆ. ನಮ್ಮನ್ನು ಗೂಂಡಾದಳ ಎಂದು ಬಿಂಬಿಸಲಾಗುತ್ತದೆ. ಆದರೆ ಅದು ನಮ್ಮ ಆದ್ಯತೆಯಲ್ಲ. ನಮ್ಮ ದೇವಾಲಯಗಳನ್ನು ಮುಚ್ಚುತ್ತಿರುವ ಅವರ ಧಾರ್ಮಿಕ ಕ್ಷೇತ್ರಕ್ಕೆ ನಾವು ಹೋಗಬಾರದು. ಹೋಗದಂತೆ ನಾವು ತಡೆಯುತ್ತೇವೆ ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್​)

- Advertisement -
spot_img

Latest News

error: Content is protected !!