ಮುಂಬೈ: ಕಾಮ ಅನ್ನೋದು ಕೆಲವರನ್ನು ಯಾವ ನೀಚ ಕೆಲಸಕ್ಕೆ ಇಳಿಸುತ್ತದೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ನಿಜಕ್ಕೂ ಇಂತಹವರಿಗೆ ಎಂತಹ ಶಿಕ್ಷೆ ಕೊಟ್ಟರೂ ಕಡಿಮೆಯೇ. ನೀವು ಊಹಿಸಲು ಸಾಧ್ಯವಾಗದ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರ ನಾಲ್ವರು ಕಾಮಾಂಧರು ಬೆಂಗಾಲ್ ಮಾನಿಟರ್ ಉಡದ ಮೇಲೆ ಅತ್ಯಾಚಾರ ಎಸಗಿದ್ದಾರೆ.
ಮಹಾರಾಷ್ಟ್ರದ ಗೋಥಾನೆ ಗ್ರಾಮದ ಬಳಿ ಇರುವ ಸಹ್ಯಾದ್ರಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ನಡೆದಿದೆ. ಆ ಮೂಕ ಪ್ರಾಣಿಯ ಮೇಲೆ ಕಾಮಾಂಧರು ದೌರ್ಜನ್ಯ ಎಸಗಿದ್ದು, ನಾಲ್ವರು ಆರೋಪಿಗಳನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಸಂದೀಪ್ ತುಕ್ರಮ್, ಪವಾರ್ ಮಂಗೇಶ್, ಜನಾರ್ಧನ್ ಕಾಮ್ಟೇಕರ್ ಮತ್ತು ಅಕ್ಷಯ್ ಸುನೀಲ್ ಎಂದು ಗುರುತಿಸಲಾಗಿದೆ. ಸಂರಕ್ಷಿತಾರಣ್ಯದಲ್ಲಿ ಆರೋಪಿಗಳು ಅಡ್ಡಾಡುವುದನ್ನು ಅರಣ್ಯದಲ್ಲಿ ಅಲ್ಲಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ನೋಡಿ ಅವರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಅಧಿಕಾರಿಗಳು ಆರಂಭದಲ್ಲಿ ಆರೋಪಿಗಳನ್ನು ಕಳ್ಳ ಬೇಟೆಗಾರರು ಭಾವಿಸಿದ್ದರು. ಆದರೆ, ಅವರ ಮೊಬೈಲ್ ಫೋನ್ ವಶಕ್ಕೆ ಪಡೆದುಕೊಂಡು ನೋಡಿದಾಗ ಅವರ ಕರಾಳ ಮುಖ ಬಯಲಾಗಿದೆ. ಬೇಟೆ ಮಾತ್ರವಲ್ಲದೆ ಉಡದ ಮೇಲೆ ಅತ್ಯಾಚಾರ ಮಾಡಿರುವ ವಿಡಿಯೋವನ್ನು ಆರೋಪಿಗಳು ರೆಕಾರ್ಡ್ ಮಾಡಿಕೊಂಡಿದ್ದರು. ಅದನ್ನು ನೋಡಿ ಅಧಿಕಾರಿಗಳೇ ಒಂದು ಕ್ಷಣ ಶಾಕ್ ಆಗಿದ್ದಾರೆ. ಇವರೆಲ್ಲರೂ ಕೊಂಕಣದಿಂದ ಕೊಲ್ಲಾಪುರದ ಚಂದೋಳಿ ಗ್ರಾಮಕ್ಕೆ ಬೇಟೆಗೆಂದು ಬಂದಿದ್ದರು ಎಂದು ಅರಣ್ಯಾಧಿಕಾರಿಗಳ ತನಿಖೆಯಿಂದ ತಿಳಿದುಬಂದಿದೆ. ತಪ್ಪಿತಸ್ಥರನ್ನು ನ್ಯಾಯಾಂಗದ ಮುಂದೆ ಹಾಜರುಪಡಿಸಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ