- Advertisement -
- Advertisement -
ತುಮಕೂರು : ಹಲಸಿನ ಹಣ್ಣಿನಾಸೆಗೆ ಮರವೇರಿದ ಕರಡಿಯೊಂದು ಮುಳ್ಳು ತಂತಿಗೆ ಸಿಲುಕಿ ನರಳಾಡಿದ ಘಟನೆ ಕೊರಟಗೆರೆ ತಾಲೂಕಿನ ಕುರಂಕೋಟೆ ಗ್ರಾಮದಲ್ಲಿ ನಡೆದಿದೆ.
ಹಲಸಿನ ಮರವೇರಿದ್ದ ಕರಡಿ ಕೆಳಗ ಇಳಿಯುವ ವೇಳೆ ಕಾಲು ಸಿಲುಕಿ ನರಳಾಡಿದೆ. ತಂತಿಗೆ ಸಿಲುಕಿ ರಾತ್ರಿ ಪೂರ್ತಿ ಒದ್ದಾಡಿದೆ ಕರಡಿ. ಬೆಳಗ್ಗೆ ಕರಡಿಯ ಚೀರಾಟ ಕೇಳಿ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮಾಹಿತಿ ಕೊಟ್ಟಿದ್ದಾರೆ.
ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಕರಡಿಯನ್ನು ರಕ್ಷಿಸಿದ್ದಾರೆ.
- Advertisement -