- Advertisement -
- Advertisement -
ಕಾಸರಗೋಡು: ಉಪ್ಪಳ ಸಮೀಪದ ಸೋಂಕಾಲ್ ನಲ್ಲಿ ಮನೆಯ ಅಂಗಳದಲ್ಲಿ ಆಟಾಡುತ್ತಿದ್ದ ಒಂದೂವರೆ ವರ್ಷದ ಮಗು ಕಾರಿನಡಿಗೆ ಸಿಲುಕಿ ಮೃತಪಟ್ಟ ಘಟನೆ ನಡೆದಿದೆ.
ಮೃತ ಪಟ್ಟ ಬಾಲಕ ಮಸ್ತುಲ್ ಜಿಶಾನ್ ಎಂದು ಗುರುತಿಸಲಾಗಿದೆ. ಸೋಂಕಾಲ್ ಕೊಡಂಗೆಯ ನಿಸಾರ್ ಅವರ ಪುತ್ರ.
ಜಿಶಾನ್ ನ ಚಿಕಪ್ಪ ಕಾರು ಮುಂದಕ್ಕೆ ತೆಗೆಯುತ್ತಿದ್ದಾಗ ಅಲ್ಲೇ ಆಟಾಡುತ್ತಿದ್ದ ಬಾಲಕನಿಗೆ ಡಿಕ್ಕಿ ಹೊಡೆದಿದ್ದು, ಬೊಬ್ಬೆ ಕೇಳಿ ಸಂಬಂಧಿಕರು ಮಗುವನ್ನು ಹೊರತೆಗೆದಿದ್ದು, ಆಸತ್ರೆಗೆ ದಾಖಲಿಸಿದರು ಮಗುವನ್ನು ಉಳಿಸಲಾಗಲಿಲ್ಲ. ಈ ಘಟನೆಯ ಬಗ್ಗೆ ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
- Advertisement -