Monday, June 8, 2026
HomeUncategorizedಕಡಬ ; ಲಂಚಕ್ಕೆ ಬೇಡಿಕೆ ಇಟ್ಟು ಐತ್ತೂರು ಗ್ರಾಮ ಪಂಚಾಯತ್ ಪಿಡಿಓ ಸಿಕ್ಕಿ ಬಿದ್ದ ಪ್ರಕರಣ;...

ಕಡಬ ; ಲಂಚಕ್ಕೆ ಬೇಡಿಕೆ ಇಟ್ಟು ಐತ್ತೂರು ಗ್ರಾಮ ಪಂಚಾಯತ್ ಪಿಡಿಓ ಸಿಕ್ಕಿ ಬಿದ್ದ ಪ್ರಕರಣ; ಅಧಿಕಾರಿಗೆ 3 ವರ್ಷ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ

- Advertisement -
- Advertisement -

ಕಡಬ ; ಲಂಚಕ್ಕೆ ಬೇಡಿಕೆ ಇಟ್ಟು ಐತ್ತೂರು ಗ್ರಾಮ ಪಂಚಾಯತ್ ಪಿಡಿಓ ಸಿಕ್ಕಿ ಬಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ  ಐತ್ತೂರು ಗ್ರಾಮ ಪಂಚಾಯತ್  ಪಿಡಿಓ ಆಗಿದ್ದ ಪ್ರೇಮ್ ಸಿಂಗ್  ಅವರಿಗೆ ಜಿಲ್ಲಾ ಸತ್ರ ನ್ಯಾಯಾಲಯ ಮಂಗಳೂರು ಜಿಲ್ಲಾ ಸತ್ರ ನ್ಯಾಯಾಲಯ ಮಂಗಳೂರು 3 ವರ್ಷಗಳ ಸಾದಾ ಸಜೆ ಹಾಗೂ ರೂ 50,000/- (ಐವತ್ತು ಸಾವಿರ) ದಂಡ , ಆರೋಪಿಯು ದಂಡ ಕಟ್ಟಲು ವಿಫಲನಾದಲ್ಲಿ ಮತ್ತೆ 01 ತಿಂಗಳ ಕಾಲ ಸಾದಾ ಸಜೆಗೆ ಆದೇಶಿಸಿ ಅಂತಿಮ ತೀರ್ಪು ನೀಡಿದೆ.

ಇನ್ಸ್ಪೆಕ್ಟರ್ ಯೋಗೀಶ್ ಕುಮಾರ್ ಬಿಸಿ ತನಿಖೆ ಮಾಡಿ , ದೋಷರೋಪ ಪಟ್ಟಿ ಶ್ಯಾಮ್ ಸುಂದರ್ ಮಾಡಿರುತ್ತಾರೆ. ಆರೋಪಿಯ ವಿರುದ್ಧ ಘನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯ ಮಂಗಳೂರು ಇಲ್ಲಿಗೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದಿರುತ್ತದೆ. ಸದರಿ ಪ್ರಕರಣದಲ್ಲಿ ಶ್ರೀ ರವೀಂದ್ರ ಮುನ್ನಿಪಾಡಿ, ವಿಶೇಷ ಸಾರ್ವಜನಿಕ ಅಭಿಯೋಜಕರು, ಕರ್ನಾಟಕ ಲೋಕಾಯುಕ್ತ ಮಂಗಳೂರು ಇವರು ಸರ್ಕಾರದ ಪರವಾಗಿ ವಾದ ಮಂಡಿಸಿರುತ್ತಾರೆ.

- Advertisement -

Latest News

error: Content is protected !!