ಬೆಳ್ತಂಗಡಿ : ACCE(I) ಬೆಳ್ತಂಗಡಿ ಸೆಂಟರ್ ನ ವಾರ್ಷಿಕ ಮಹಾಸಭೆ ಮತ್ತು 2023-25 ರ ಆಡಳಿತ ಮಂಡಳಿ ಪದಾಪ್ರದಾನ ಸಮಾರಂಭ ತಾ.11/06/2023 ರಂದು ಉಜಿರೆ ಓಷಿಯನ್ ಪರ್ಲ್ ಸಭಾಂಗಣದಲ್ಲಿ ನಡೆಯಿತು. ಮುಂದಿನ 2 ವರ್ಷ ಸಂಘದ ಚೇರ್ಮೆನ್ ಆಗಿ Er.ಜಗದೀಶ್ ಪ್ರಸಾದ್,ಕಾರ್ಯದರ್ಶಿ ಯಾಗಿ Er.ಚೇತನ್,ಖಜಾಂಚಿ ಯಾಗಿ Er.ಕೇಶವ ಅಧಿಕಾರ ವಹಿಸಿಕೊಂಡರು.
ಆಡಳಿತ ಮಂಡಳಿ ಸದಸ್ಯರಾಗಿ Er.ಶಿಜೋ,Er.ನಾಗೇಶ್ ಎಂ,Er.ನಿತಿನ್, Er.ಪ್ರಮೋದ್ ಜವಾಬ್ದಾರಿ ವಹಿಸಿಕೊಂಡರು. ನಿರ್ಗಮಿತ ಕಾರ್ಯದರ್ಶಿ Er.ವಿದ್ಯಾಕುಮಾರ್ 2022-23 ರ ಕಾರ್ಯಕ್ರಮಗಳ ವರದಿ ಮಂದಿಸಿದರು.Er.ಸುರೇಶ ಬಂಗೇರ ಆಯವ್ಯಯ ಪಟ್ಟಿ ವಾಚಿಸಿದರು.ಚುನಾವಣಾಧಿಕಾರಿ Er.ಶ್ರವಣ್ ಹೊಸ ಕಾರ್ಯಕಾರಿ ಸಮಿತಿಯನ್ನು ಘೋಷಿಸಿದರು.ಕಾರ್ಯಕ್ರಮದ ಪದಾಪ್ರದಾನ ಅಧಿಕಾರಿಯಾಗಿ ಮುಂದಿನ ACCE(I) ನ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಮಂಗಳೂರಿನವರಾ ದ Er.ರಾಜೇಂದ್ರ ಕಲ್ಬಾವಿ ಹೊಸ ತಂಡಕ್ಕೆ ಶುಭ ಕೋರಿ, ಹಿಂದಿನ ವರ್ಷದ ಕೆಲಸ,ಕಾರ್ಯ ಗಳನ್ನು ಮುಕ್ತ ಕಂಠದಿಂದ ಶ್ಲಾಘಸಿದರು.
ಕಾರ್ಯಕ್ರಮದಲ್ಲಿ ಸಿವಿಲ್ ಇಂಜಿನಿಯರ್ಸ್ ಕನ್ ಸಲ್ಟಿನ್ಗ್ ಫೀ structure ಬಿಡುಗಡೆ ಮಾಡಿದರು.ಮುಂದಿನ ವರ್ಷದ ಬಜೆಟ್ Er.ಕೇಶವ ಮಂಡಿಸಿದರು.Er.ಚೇತನ್ ಧನ್ಯವಾದ ಸಮರ್ಪಿಸಿದರು. Er.ವಿದ್ಯಾಶ್ರೀ ಕಾರ್ಯಕ್ರಮ ನಿರೂಪಿಸಿದರು.ಅಖಿಲ ಭಾರತ ಸಿವಿಲ್ ಇಂಜಿನಿಯರ್ಸ್ ಬೆಳ್ತಂಗಡಿ ಸೆಂಟರ್ ನ ಸದಸ್ಯರು ಉಪಸ್ಥಿತರಿದ್ದರು.