- Advertisement -
- Advertisement -
ಬೆಂಗಳೂರು : ಕೋರಮಂಗಲ ಆರ್ ಟಿ ಒ ಕಛೇರಿ ಮೇಲೆ ಎಸಿಬಿ ಧಿಡೀರ್ ಧಾಳಿ ನಡೆಸಿದ್ದು, ದಾಳಿ ವೇಳೆ ಕಂತೆ ಹಣ ಪತ್ತೆಯಾಗಿದೆ.
ಸಾರ್ಜನಿಕರ ದೂರಿನ ಮೇರೆಗೆ ದಾಳಿ ನಡೆಸಿದ ಎಸಿಬಿ ದಾಳಿ ನಡೆದ್ದು, ಶೋಧ ಕಾರ್ಯದ ವೇಳೆ ಕಂತೆ ಕಂತೆ ನೋಟುಗಳು ಪತ್ತೆಯಾಗಿದ್ದು, ಅಧಿಕಾರಿಗಳು ಹಾಗೂ ಏಜೆಂಟರ ವಿರುದ್ಧ ದೂರು ನೀಡಿದ ಹಿನ್ನೆಲೆ ದಾಳಿ ನಡೆಸಲಾಗಿದೆ.
ಆರ್ ಟಿ ಒ ಕಛೇರಿ ಅಧಿಕಾರಿಗಳು ಇನ್ನೇನು ಮನೆಗೆ ಹೊರಡುವ ಸಮಯದಲ್ಲಿ ಈ ದಾಳಿ ನಡೆಸಲಾಗಿದ್ದು, ದಾಳಿ ವೇಳೆ ಹಣ ಸೇರಿದಂತೆ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಸದ್ಯ ಅಧಿಕಾರಿಗಳು ಶೋಧ ಕಾರ್ಯ ಮುಂದುವರೆಸಿದ್ದು, ಕಛೇರಿಯ ಮೂಲೆ ಮೂಲೆಗಳಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
- Advertisement -