- Advertisement -
- Advertisement -
ಸುಬ್ರಹ್ಮಣ್ಯ: ನಿಸರ್ಗ ಯುವಕ ಮಂಡಲ ಐನೆಕಿದು ನೇತೃತ್ವದಲ್ಲಿ ಸುಬ್ರಹ್ಮಣ್ಯ ಗ್ರಾ.ಪಂ ಸಹಕಾರದಲ್ಲಿ ಉದ್ಯೋಗ ಖಾತ್ರಿ ವತಿಯಿಂದ ಐನೆಕಿದು ಬಳಿ ಸಾರ್ವಜನಿಕ ಬಾವಿಯನ್ನು ಕೊರೆಯಲಾಗಿದೆ.
ಐನೆಕಿದುವಿನ ಸಮುದಾಯ ಭವನದ ಬಳಿ ಈ ಬಾವಿ ರಚಿಸಲಾಗಿದ್ದು ಯುವಕ ಮಂಡಲದವರು ರಾತ್ರಿ ಹಗಲು ಕೆಲಸ ಮಾಡಿದ್ದಾರೆ. ಸಾರ್ವಜನಿಕರ ಉಪಯೋಗಕ್ಕೆ ಅಗತ್ಯವಾದ ಬಾವಿ ರೆಡಿಯಾಗುತ್ತಿದೆ. ಸುಮಾರು 30 ಅಡಿ ಬಾವಿ ರಚನೆಯಾಗಿದ್ದು ನೀರು ಸಿಕ್ಕಿದೆ.
ಮುಂದಿನ ದಿನಗಳಲ್ಲಿ ಮುಖ್ಯವಾಗಿ ಸಮುದಾಯ ಭವನಕ್ಕೆ ಮತ್ತು ಸಾರ್ವಜನಿಕರಿಗೆ ನೀರಿನ ವ್ಯವಸ್ಥೆ ಆಗಲಿದೆ. ಈ ಭಾಗದ ಗ್ರಾ.ಪಂ ಸದಸ್ಯರು, ಪಂಚಾಯತ್ ನವರು ಪೂರ್ಣ ಪ್ರಮಾಣದಲ್ಲಿ ಸಹಕರಿಸಿದ್ದಾರೆ.
- Advertisement -