- Advertisement -
- Advertisement -
ಚಿತ್ರದುರ್ಗ: ನೆಟ್ಟಗೆ ನಿಲ್ಲುವುದಕ್ಕೂ ಆಗದ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ 96 ವಯಸ್ಸಿನ ಇಳಿ ವಯಸ್ಸಿನ ಅಜ್ಜಿ ಗೋವಿಂದಮ್ಮ ಕೊರೋನಾವನ್ನು ಸೋಲಿಸಿ ಸಾವು ಗೆದ್ದು ಬಂದಿದ್ದಾರೆ. ಸಾವಿನ ಭಯದಲ್ಲಿ ನಡುಗುತ್ತಿರುವವರಿಗೆ ಈ ಅಜ್ಜಿ ತಮ್ಮ ಧೈರ್ಯದ ಮೂಲಕ ವಿಶ್ವಾಸ ತುಂಬಿದ್ದಾರೆ.
ಜೂ.26ರಂದು ಆಸ್ಪತ್ರೆಗೆ ದಾಖಲಾಗಿದ್ದ ಅಜ್ಜಿ ಸಂಪೂರ್ಣ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಕೊರೋನಾ ಬಂದ್ರೆ ಕಥೆ ಮುಗೀತು ಎಂದುಕೊಂಡ ಜನರ ಪಾಲಿಗೆ ಇವರು ಭರವಸೆ ಮೂಡಿಸಿದ್ದಾರೆ. ಆತ್ಮಸ್ಥೈರ್ಯವಿದ್ದರೆ ಸಾವನ್ನೂ ಸೋಲಿಸಬಹುದು ಎಂಬುದನ್ನು ಈ ಹಿರಿಯ ಅಜ್ಜಿ ತೋರಿಸಿಕೊಟ್ಟಿದ್ದಾರೆ.
ಹಿರಿಯೂರಿನ ವೇದಾವತಿ ನಗರ ಬಡಾವಣೆಯ ವರ್ತಕ ಗೋವರ್ಧನ್ ಶೆಟ್ಟಿಅವರ ತಾಯಿ ಈ ವೃದ್ಧೆ ಗೋವಿಂದಮ್ಮ. ಇದೀಗ ಕೊರೋನಾ ಜಯಿಸಿದ ರಾಜ್ಯದ ಎರಡನೇ ಅತೀ ಹಿರಿಯ ಮಹಿಳೆ ಎಂಬ ಹೆಗ್ಗಳಿಕೆಗೂ ಅವರು ಪಾತ್ರವಾಗಿದ್ದಾರೆ.
- Advertisement -