Saturday, May 18, 2024
Homeಪ್ರಮುಖ-ಸುದ್ದಿರಾಜ್ಯದಲ್ಲಿ ಇಂದೂ 5 ಸಾವಿರದ ಗಡಿ ದಾಟಿದ ಕೊರೊನಾ ಪ್ರಕರಣ, 75 ಮಂದಿ ಕೋವಿಡ್ ಗೆ...

ರಾಜ್ಯದಲ್ಲಿ ಇಂದೂ 5 ಸಾವಿರದ ಗಡಿ ದಾಟಿದ ಕೊರೊನಾ ಪ್ರಕರಣ, 75 ಮಂದಿ ಕೋವಿಡ್ ಗೆ ಬಲಿ, ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ

spot_img
- Advertisement -
- Advertisement -

ಬೆಂಗಳೂರು : ಕರ್ನಾಟಕದಲ್ಲಿ ಇಂದೂ ಕೂಡ 5 ಸಾವಿರಕ್ಕಿಂತ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗಿವೆ ಇಂದು ಬರೋಬ್ಬರಿ 5324 ಕೋವಿಡ್ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,01465 ಕ್ಕೆ ಏರಿಕೆಯಾಗಿದೆ. ಇನ್ನು 1847 ಜನ ಇವತ್ತು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಸದ್ಯ ರಾಜ್ಯದಲ್ಲಿ 61,819 ಸಕ್ರೀಯ ಪ್ರಕರಣಗಳಿವೆ. ಇದುವರೆಗೂ 37,685 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.ಇನ್ನು 75 ಮಂದಿ ಇಂದು ಮಾಹಾಮಾರಿಗೆ ಬಲಿಯಾಗಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 1953ಕ್ಕೆ ಏರಿಕೆಯಾಗಿದೆ.

ಹಾಗೇ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆಯಾಗಿದ್ದು, ಕೊಂಚ ಸಮಾಧಾನ ತಂದಿದೆ. ಇಂದು ರಾಜ್ಯ ರಾಜಧಾನಿಯಲ್ಲಿ 1470 ಕೇಸುಗಳು ಪತ್ತೆಯಾಗಿದ್ದು, 26 ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆ. ಇದುವರೆಗೂ ರಾಜಧಾನಿಯಲ್ಲಿ 46,923 ಪ್ರಕರಣಗಳು ವರದಿಯಾಗಿದ್ದು, 12,189 ಜನ ಮುಖಮುಖರಾದಿದ್ದಾರೆ. ಸದ್ಯ 33,816 ಸಕ್ರೀಯ ಪ್ರಕರಣಗಳಿವೆ. ಇದುವೆರೆಗೂ ಕೊರೊನಾಗೆ ಸಿಲಿಕಾನ್ ಸಿಟಿಯಲ್ಲಿ 917 ಮಂದಿ ಬಲಿಯಾಗಿದ್ದಾರೆ.

- Advertisement -
spot_img

Latest News

error: Content is protected !!