Thursday, May 2, 2024
Homeಕರಾವಳಿಮಂಗಳೂರು: ವೇಗವಾಗಿ ಬರುತ್ತಿದ್ದ ರೈಲಿನಿಂದ ಆಡನ್ನು ರಕ್ಷಿಸಲು ಪ್ರಯತ್ನಿಸಿದ ಯುವಕ ಗಾಯಗೊಂಡು ಸಾವು !

ಮಂಗಳೂರು: ವೇಗವಾಗಿ ಬರುತ್ತಿದ್ದ ರೈಲಿನಿಂದ ಆಡನ್ನು ರಕ್ಷಿಸಲು ಪ್ರಯತ್ನಿಸಿದ ಯುವಕ ಗಾಯಗೊಂಡು ಸಾವು !

spot_img
- Advertisement -
- Advertisement -

ಮಂಗಳೂರು: ಖಾಸಗಿ ಬಸ್ಸಿನ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಚೇತನ್ (21) ಅವರು ರೈಲಿನಡಿಗೆ ಸಿಲುಕಿದ ಆಡನ್ನು ರಕ್ಷಿಸಲು ಪ್ರಯತ್ನಿಸುತ್ತಾ ತಮ್ಮ ಎರಡೂ ಕಾಲುಗಳನ್ನು ಕಳೆದುಕೊಂಡು ಸಾವನ್ನಪ್ಪಿದ್ದಾರೆ.

ಎರಡು ತಿಂಗಳ ಹಿಂದೆ ಚೇತನ್ ರೈಲ್ವೇ ಹಳಿ ಮೇಲೆ ಆಡು ಆಟವಾಡುತ್ತಿದ್ದದನ್ನು ನೋಡಿದ್ದರು. ಮುಂದೆ ಬರುತ್ತಿರುವ ರೈಲಿನ ಸದ್ದು ಕೇಳುತ್ತಿದ್ದಂತೆ ಹಳಿಗಳತ್ತ ಧಾವಿಸಿ ಹಳಿಯಿಂದ ಆಡನ್ನು ಮೇಲೆತ್ತಲು ಯತ್ನಿಸಿದರು.

ಆದರೆ, ತಡವಾಗಿ ಚೇತನ್‌ಗೆ ರೈಲು ಡಿಕ್ಕಿ ಹೊಡೆದು ಆತನ ಕಾಲುಗಳ ಮೇಲೆ ಹರಿದಿದೆ.
ಗಂಭೀರವಾಗಿ ಗಾಯಗೊಂಡಿರುವ ಚೇತನ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಸ್ನೇಹಿತರು ನಗರದ ರಸ್ತೆಗಳಲ್ಲಿ ಭಿಕ್ಷೆ ಕೇಳಿ ಆತನ ಚಿಕಿತ್ಸೆಗೆ ಹಣ ಸಂಗ್ರಹಿಸಿದ್ದರು. ಅವರ ಚಿಕಿತ್ಸೆಗೆ ಅನೇಕರು ಸಹಾಯ ಮಾಡಿದರು. ಸ್ವಲ್ಪ ಚೇತರಿಸಿಕೊಂಡ ಚೇತನ್ ಅವರನ್ನು ಮನೆಗೆ ಕರೆತರಲಾಯಿತು.

ಆದರೆ, ಮಾನಸಿಕವಾಗಿ ನೊಂದಿದ್ದ ಅವರು ಆಹಾರ ಸೇವಿಸಲು ನಿರಾಕರಿಸಿದ್ದರಿಂದ ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

- Advertisement -
spot_img

Latest News

error: Content is protected !!