Thursday, May 2, 2024
Homeತಾಜಾ ಸುದ್ದಿಕೇರಳ; ಚಿಕನ್‌ ಶವರ್ಮ ತಿಂದು ಅಸ್ವಸ್ಥನಾಗಿ ಯುವಕ ;ಚಿಕಿತ್ಸೆ ಫಲಿಸದೇ ಸಾವು

ಕೇರಳ; ಚಿಕನ್‌ ಶವರ್ಮ ತಿಂದು ಅಸ್ವಸ್ಥನಾಗಿ ಯುವಕ ;ಚಿಕಿತ್ಸೆ ಫಲಿಸದೇ ಸಾವು

spot_img
- Advertisement -
- Advertisement -

ಕೇರಳ; ಚಿಕನ್‌ ಶವರ್ಮ ತಿಂದ ಬಳಿಕ ಅಸ್ವಸ್ಥನಾಗಿದ್ದ ಯುವಕನೋರ್ವ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಘಟನೆ ಕಕ್ಕನಾಡ್‌ನ ಮೆವೆಲಿಪುರಂ ಎಂಬಲ್ಲಿ ನಡೆದಿದೆ. ರಾಹುಲ್ ಡಿ.ನಾಯರ್ ಮೃತ ಯುವಕ.

ರಾಹುಲ್ ಕಕ್ಕನಾಡ್‌ನ ಮೆವೆಲಿಪುರಂ ಎಂಬಲ್ಲಿರುವ ರೆಸ್ಟೋರೆಂಟ್‌ವೊಂದರಲ್ಲಿ ಚಿಕನ್ ಶವರ್ಮ ತಿಂದಿದ್ದ. ಬಳಿಕ ಅಸ್ವಸ್ಥನಾಗಿದ್ದ. ಆತನನ್ನು ಅಕ್ಟೋಬರ್ 22 ರಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರೆಸ್ಟೋರೆಂಟ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸೆಕ್ಷನ್‌ 284ರ ಅಡಿ ದೂರು ದಾಖಲಾಗಿದೆ.ಶವರ್ಮಾ ಸೇವಿಸಿ ಜನರ ಆರೋಗ್ಯ ಹದಗೆಟ್ಟ ಹಿನ್ನೆಲೆ ದೂರು ಬಂದಿದ್ದು, ಹೀಗಾಗಿ ಹೊಟೇಲ್‌ನ್ನು ನಗರ ಪಾಲಿಕೆ ಆರೋಗ್ಯಾಧಿಕಾರಿಗಳು ಬಂದ್ ಮಾಡಿಸಿದ್ದಾರೆ.

- Advertisement -
spot_img

Latest News

error: Content is protected !!