- Advertisement -
- Advertisement -
ಉಡುಪಿ: ಒಂಟಿ ಸಲಗವೊಂದು ಗ್ರಾಮದೊಳಗೆ ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ಕುಂದಾಪುರ ತಾಲೂಕಿನ ಸಿದ್ಧಾಪುರದಲ್ಲಿ ನಡೆದಿದೆ.ಹೊಸಂಗಡಿಯ ಸಿದ್ಧಾಪುರ ಭಾಗದಲ್ಲಿ ಮನೆ ಸಮೀಪವೇ ಒಂಟಿ ಸಲಗ ಓಡಾಟ ನಡೆಸಿದ್ದು ಗ್ರಾಮಸ್ಥರು ಭಯ ಭೀತರಾಗಿದ್ದಾರೆ.
ಕಾಡಾನೆ ಓಡಾಟದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಿದ್ಧಾಪುರ ವ್ಯಾಪ್ತಿಯ ಅಂಗನವಾಡಿ ಮತ್ತು ಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ.
ನಿನ್ನೆ ಬಾಳೆಬರೆ ಘಾಟಿಯಲ್ಲಿ ಕೂಡಾ ಕಾಡಾನೆ ಕಾಣಿಸಿಕೊಂಡಿದ್ದು, ಸೆರೆ ಹಿಡಿಯಲು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.
- Advertisement -