- Advertisement -
- Advertisement -
ಮಡಿಕೇರಿ: ತರಕಾರಿ ಮಳಿಗೆಯಲ್ಲಿದ್ದ ತರಕಾರಿಗಳನ್ನು ಕಾಡಾನೆ ರಾತ್ರಿ ವೇಳೆ ಭಕ್ಷಿಸಿದ ಘಟನೆ ಕೊಡಗು ಜಿಲ್ಲೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ವಿರಾಜಪೇಟೆ ತಾಲ್ಲೂಕಿನ ದೇವರಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ತಿತಿಮತಿ-ದೇವರಪುರ ಹೆದ್ದಾರಿಯಲ್ಲಿ ದ್ದ ತರಕಾರಿ ಮಳಿಗೆಯಲ್ಲಿ ಕಾಡಾನೆ ತರಕಾರಿ ತಿಂದು ಹಾಕಿದೆ.
ತರಕಾರಿ ಅಂಗಡಿಯ ಟಾರ್ಪಲ್ ಕಿತ್ತು ಹಾಕಿ ಕಾಡನೆ ಮನಸೋ ಇಚ್ಚೆ ತರಕಾರಿಗಳನ್ನು ತಿಂದಿದೆ.
ತರಕಾರಿ ತಿಂದ ಬಳಿಕ ರಾತ್ರಿಯಿಡೀ ರಾಜ್ಯ ಹೆದ್ದಾರಿಯಲ್ಲಿ ಆನೆ ಅಡ್ಡಾಡಿದೆ.
ತರಕಾರಿ ಮಳಿಗೆ ಜೈನುದ್ದೀನ್ ಎಂಬುವರಿಗೆ ಸೇರಿದ್ದಾಗಿದೆ.
- Advertisement -