- Advertisement -
- Advertisement -
ಉಡುಪಿ: ರೋಹಿತ್ ಚಕ್ರತೀರ್ಥರನ್ನು ಯಕ್ಷಗಾನ ಸಮ್ಮೇಳನದ ಗೋಷ್ಠಿಯಲ್ಲಿ ದಿಕ್ಸೂಚಿ ಭಾಷಣ ಮಾಡಲು ಆಹ್ವಾನಿಸಿರುವುದಕ್ಕೆ ಸಾಕಷ್ಟು ಟೀಕೆಗಳು ಕೇಳಿಬಂದಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸುನಿಲ್ ಕುಮಾರ್, ರೋಹಿತ್ ಚಕ್ರತೀರ್ಥರನ್ನು ಯಕ್ಷಗಾನ ಸಮ್ಮೇಳನಕ್ಕೆ ಆಹ್ವಾನಿಸಿರೋದು ತಪ್ಪಲ್ಲ. ಎಲ್ಲರದಲ್ಲೂ ತಪ್ಪು ಹುಡುಕಬಾರದು. ರೋಹಿತ್ ಚಕ್ರತೀರ್ಥರಂತಹ ಇನ್ನೂ ಹತ್ತು ಜನರನ್ನು ಕರೆಯುತ್ತೇವೆ ಎಂದರು.
ಈ ಮೂಲಕ ರೋಹಿತ್ ಚಕ್ರತೀರ್ಥರಂತಹ ರಾಷ್ಟ್ರೀಯ ವಿಚಾರಧಾರೆಗಳನ್ನು ಹೊಂದಿರುವ ಲೇಖಕರನ್ನು ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನಕ್ಕೆ ಆಹ್ವಾನಿಸಿದ್ದನ್ನು ಸಮರ್ಥಿಸಿಕೊಂಡರು.
- Advertisement -