- Advertisement -
- Advertisement -
ಬೆಂಗಳೂರು: ದೀಪಾವಳಿ ಹಬ್ಬದ ಬಲಿ ಪಾಡ್ಯಮಿ ಹಿನ್ನೆಲೆಯಲ್ಲಿ ಪಶು ಸಂಗೋಪನಾ ಇಲಾಖೆಯ ವತಿಯಿಂದಲೂ ಗೋ ಪೂಜೆಗೆ ಆದೇಶಿಸಲಾಗಿದೆ.
ಬಲಿಪಾಡ್ಯಮಿ ದಿನದಂದು ಎಲ್ಲಾ ಪಶು ವೈದ್ಯಕೀಯ ಸಂಸ್ಥೆಗಳು, ಸರ್ಕಾರಿ ಹಾಗೂ ಖಾಸಗಿ ಗೋ ಶಾಲೆಗಳಲ್ಲಿ ಗೋ ಪೂಜೆಗೆ ಸೂಚನೆ ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಸೂಚನೆ ನೀಡಿದ್ದಾರೆ.ಬಲಿ ಪಾಡ್ಯಮಿ ದಿನ ಪೂರ್ವಾಹ್ನ ವಿಜೃಂಭಣೆಯಿಂದ ಗೋ ಪೂಜೆ ನಡೆಸುವಂತೆ ಪಶು ಸಂಗೋಪನಾ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ.
ಮೊನ್ನೆಯಷ್ಟೇ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ಗೋ ಪೂಜೆ ನಡೆಸುವಂತೆ ಮುಜರಾಯಿ ಇಲಾಖೆಯಿಂದ ಆದೇಶ ಹೊರಡಿಸಲಾಗಿತ್ತು.
- Advertisement -