- Advertisement -
- Advertisement -
ನವದೆಹಲಿ: ದ್ವೇಷ ಭಾಷಣಗಳ ಕುರಿತು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ 21ನೇ ಶತಮಾನದಲ್ಲಿ ಜಾತ್ಯಾತೀತ ದೇಶವೊಂದಕ್ಕೆ ದ್ವೇಷ ಭಾಷಣ ಬಹಳ ಅಪಾಯಕಾರಿ ಎಂದು ಹೇಳಿದೆ. ಇದು 21 ನೇ ಶತಮಾನ, ನಾವು ಧರ್ಮದ ಹೆಸರಿನಲ್ಲಿ ಎಲ್ಲಿಗೆ ತಲುಪಿದ್ದೇವೆ ಎಂದು ಕೇಳಿದೆ.
ಭವಿಷ್ಯದಲ್ಲಿ ದ್ವೇಷ ಭಾಷಣ ವಿಚಾರದಲ್ಲಿ ಪೊಲೀಸರು ಎಫ್ಐಆರ್ ಆಗುವವರೆಗೂ ಕ್ರಮ ಕೈಗೊಳ್ಳಲು ಕಾಯಬೇಕಾದ ಅಗತ್ಯವಿಲ್ಲ. ತ್ವರಿತ ಕ್ರಮ ದಾಖಲಾಗಬೇಕು ಎಂದು ದೇಶದ ಅಗ್ರ ನ್ಯಾಯಾಲಯ ಹೇಳಿದೆ. ದ್ವೇಷದ ಭಾಷಣದ ಬಗ್ಗೆ ಅರ್ಜಿಯನ್ನು ಆಲಿಸಿದ ನ್ಯಾಯಾಲಯವು ಧರ್ಮ ನಿರಪೇಕ್ಷ ಆಗಬೇಕಿದ್ದ ದೇಶದಲ್ಲಿ ಇದು ಆಘಾತಕಾರಿ ಸಂಗತಿ ಎಂದು ಹೇಳಿದೆ.
- Advertisement -