- Advertisement -
- Advertisement -
ತುಮಕೂರು: ರಾಜ್ಯ ಸರ್ಕಾರ ಮರಾಠ ಪ್ರಾಧಿಕಾರ ಯೋಜನೆ ಮಾಡಿದ್ದು ಸರಿಯಲ್ಲ ಎಂದು ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ .ಈ ಯೋಜನೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಜ.9ರಂದು ರಾಜ್ಯದೆಲ್ಲೆಡೆ ಕನ್ನಡ ಪರ ಹೋರಾಟಗಾರರು ರೈಲು ಬಂದ್ ಚಳವಳಿ ನಡೆಸಲಿದ್ದಾರೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜು ತಿಳಿಸಿದ್ದಾರೆ.
ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಾಂಸ್ಕೃತಿ ಹಿನ್ನೆಲೆ ಇಲ್ಲ, ಗಡಿನಾಡಿನ ಬಗ್ಗೆ ತಿಳಿದಿಲ್ಲ, ಎಷ್ಟೇ ಒತ್ತಡ ಹಾಕಿದರೂ ಸರ್ಕಾರ ಮರಾಠ ಪ್ರಾಧಿಕಾರವನ್ನು ಹಿಂಪಡೆಯಲು ಮುಂದಾಗುತ್ತಿಲ್ಲ.ಹಾಗಾಗಿ ರಾಜ್ಯದ 500 ಕಡೆ ರೈಲುಬಂದ್ ನಡೆಯಲಿದೆ, ಯಾವುದೇ ಸ್ಥಳದಲ್ಲಿ ಬೇಕಾದರೂ ಹೋರಾಟಗಾರರು ರೈಲು ತಡೆಯಲಿದ್ದಾರೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿ ತಿಳಿಸಿದರು.
- Advertisement -