Thursday, April 25, 2024
Homeಕರಾವಳಿಕೊರೊನಾ ಸೋಂಕಿತನ ಜೀವ ಉಳಿಸಿದ ಉಜಿರೆಯ ಯುವಕರು: ಗುರುಪ್ರಸಾದ್ ಕೋಟ್ಯಾನ್ ಹಾಗೂ ವಿಫುಲ್ ಕಾರ್ಯಕ್ಕೆ...

ಕೊರೊನಾ ಸೋಂಕಿತನ ಜೀವ ಉಳಿಸಿದ ಉಜಿರೆಯ ಯುವಕರು: ಗುರುಪ್ರಸಾದ್ ಕೋಟ್ಯಾನ್ ಹಾಗೂ ವಿಫುಲ್ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ

spot_img
- Advertisement -
- Advertisement -

ಬೆಳ್ತಂಗಡಿ : ಬೆಂಗಳೂರಿನಲ್ಲಿ ವಾಸವಾಗಿರುವ ಉಜಿರೆಯ ನಿವಾಸಿಯಾಗಿರುವ ಕೃಷ್ಣಪ್ಪ(50) ರವರಿಗೆ ಕೊರೊನಾ ಪಾಸಿಟಿವ್  ಆಗಿತ್ತು.  ಬೆಂಗಳೂರಿನಲ್ಲಿ ಯಾವುದೇ ಆಸ್ಪತ್ರೆಯಲ್ಲಿ  ಅವರಿಗೆ ಬೆಡ್ ಸಿಕ್ಕಿರಲಿಲ್ಲ.

ಈ ವಿಷಯ ತಿಳಿದ ಉಜಿರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಕಲಚೇತನರ ಕಾರ್ಯಕರ್ತರಾದ ವಿಫುಲ್ ಅವರ ಕರೆಗೆ ತಕ್ಷಣ ಸ್ಪಂದಿಸಿದ ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯ 96 ಬೂತಿನ ಸದಸ್ಯ ಗುರುಪ್ರಸಾದ್ ಕೊಟ್ಯಾನ್ ಪಾಲೆಂಜ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ತೆರಳಿ ಅವರಿಗೆ ಬೇಕಾದ ವ್ಯವಸ್ಥೆ ಮಾಡಿದ್ದಾರೆ. ಬಳಿಕ ಸೋಂಕಿತ ವ್ಯಕ್ತಿಯನ್ನು ಮಂಗಳೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಸಿದ್ದಾರೆ. ನಂತರ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಸಿಗುವಂತೆ ಮಾಡಿದ್ದಾರೆ.

ಇನ್ನು ಕೃಷ್ಣಪ್ಪ ಅವರು  ವಿಕಲಚೇತನರಾಗಿದ್ದು ಗ್ರಾ.ಪ ಸದಸ್ಯ ಗುರುಪ್ರಸಾದ್ ಕೋಟ್ಯಾನ್ ಪಾಲೆಂಜ ಮತ್ತು ಉಜಿರೆ ಗ್ರಾ.ಪ ವ್ಯಾಪ್ತಿಯ ವಿಕಲಚೇತನರ ಕಾರ್ಯಕರ್ತ ವಿಫುಲ್ ಅವರಿಂದಾಗಿ ಇದೀಗ ಅವರಿಗೆ ಮರುಜನ್ಮ ಸಿಕ್ಕಿದಂತಾಗಿದೆ. ಈ ಯುವಕರ ಕಾರ್ಯಕ್ಕೆ ಇದೀಗ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

- Advertisement -
spot_img

Latest News

error: Content is protected !!