ಉಡುಪಿ : ಶ್ರೀಕೃಷ್ಣ ಮಠದಲ್ಲಿ ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವವು ಜನವರಿ 18 ರಂದು ನಡೆಯಲಿದೆ.ಇದರ ಅಂಗವಾಗಿ ಚಪ್ಪರ ಮುಹೂರ್ತವು ಇಂದು ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಜಾಗದಲ್ಲಿ ನಡೆಯಿತು .
ಶ್ರೀ ಮಠದ ಪುರೋಹಿತರಾದ ವೇ.ಮೂ.ಶ್ರೀನಿವಾಸ ಉಪಾಧ್ಯಾಯರು ಧಾರ್ಮಿಕ ಕಾರ್ಯಕ್ರಮವನ್ನು ನೆರವೇರಿಸಿದರು.
ಚಪ್ಪರದ ಕಂಬ ನೆಡುವ ಮೂಲಕ ಕೆನರಾ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ರಾಮ ನಾಯ್ಕ ಇವರು ಚಾಲನೆ ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪರ್ಯಾಯೋತ್ಸವ ಸಮಿತಿಯ ಅಧ್ಯಕ್ಷರಾದ ಕೆ.ಸೂರ್ಯನಾರಾಯಣ ಉಪಾಧ್ಯಾಯ , ಸಮಿತಿಯ ಕಾರ್ಯದರ್ಶಿ ವಿಷ್ಣು ಪ್ರಸಾದ್ ಪಾಡಿಗಾರ್ , ಸಮಿತಿಯ ಪಿಆರ್ ಓ ಬಿ.ವಿ.ಲಕ್ಷ್ಮೀನಾರಾಯಣ , ಹೊರೆ ಕಾಣಿಕೆ ಸಮಿತಿಯ ಅಧ್ಯಕ್ಷರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ , ಪರ್ಯಾಯ ಸಮಿತಿಯ ಯು.ರಾಘವೇಂದ್ರ ರಾವ್ , ರಾಮಚಂದ್ರ ಉಪಾಧ್ಯಾಯ , ಭಾಸ್ಕರ ರಾವ್ ಕಿದಿಯೂರು , ಪ್ರವೀಣ ಉಪಾಧ್ಯಾಯ , ರಮಾಕಾಂತ ಭಟ್ , ಮಾರ್ಪಳ್ಳಿ ಸುಬ್ರಹ್ಮಣ್ಯ ಉಪಾಧ್ಯಾಯ ಮತ್ತು ಪದಾಧಿಕಾರಿಗಳು , ಶ್ರೀ ಮಠದ ಸೀತಾರಾಮ ಭಟ್ ಹಾಗೂ ಕೊಟ್ಟಾರಿಗಳಾದ ರಾಘವೇಂದ್ರ ರಾವ್ , ಗುತ್ತಿಗೆದಾರರದ ವೆಂಕಟರಮಣ ಹೆಗಡೆ ಹಾಗೂ ರವಿರಾಜ್ ಅಲೆವೂರು ಉಪಸ್ಥಿತರಿದ್ದರು .