- Advertisement -
- Advertisement -
ಉಡುಪಿ; ಹೊಳೆಗೆ ಹಾರಿ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೂರಿನ ಸುಧಾಕರ (66) ಮೃತ ವ್ಯಕ್ತಿ.
ಬಿಪಿ ಹಾಗೂ ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮನೆಯ ಸಮೀಪ ಇರುವ ಮಡಿ ಹೊಳೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ನಿನ್ನೆ ಅಪರಾಹ್ನ 2ಗಂಟೆಯ ಸುಮಾರಿಗೆ ಮನೆಯಿಂದ ಯಾರಿಗೂ ಹೇಳದೇ ಹೊರಗೆ ಹೋಗಿದ್ದ ಸುಧಾಕರ್ ಗಾಗಿ ಹುಡುಕಾಡಿದಾಗ ಅವರು ಬಳಸುತ್ತಿದ್ದ ಊರುಗೋಲು ಹೊಳೆಯ ದಡದಲ್ಲಿ ಪತ್ತೆಯಾಗಿತ್ತು. ನೀರಿಗೆ ಬಿದ್ದಿರಬೇಕೆಂಬ ಸಂಶಯದಿಂದ ಹೊಳೆಯ ನೀರಿನಲ್ಲಿ ಹುಡುಕಾಡಿದಾಗ ಸಂಜೆ 6:30ರ ಸುಮಾರಿಗೆ ಮೃತದೇಹ ಪತ್ತೆಯಾಗಿತ್ತು.ಈ ಬಗ್ಗೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
- Advertisement -