Tuesday, July 1, 2025
Homeಕರಾವಳಿಉಡುಪಿಉಡುಪಿ:ಮನೆಯೊಂದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ

ಉಡುಪಿ:ಮನೆಯೊಂದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ

spot_img
- Advertisement -
- Advertisement -

ಉಡುಪಿ:ಮನೆಯೊಂದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಉಡುಪಿ ಜಿಲ್ಲೆಯ ಶಿರ್ವ ಸಮೀಪ ಮನೆಯೊಂದರಲ್ಲಿ ನಡೆದಿದೆ. ಶಿರ್ವ ನಿವಾಸಿ ಪವಿತ್ರ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕಾರ್ಯ ಮುಂದುವರೆಸಿದ್ದಾರೆ.

ಪವಿತ್ರ ಅವರು ದಿನಾಂಕ:27.06.2025 ರಂದು ರಾತ್ರಿ 09:45 ಗಂಟೆಗೆ ಮನೆಯ ಬಾಗಿಲನ್ನು ಭದ್ರಪಡಿಸಿ ರೂಮ್‌ನ ಒಳಗಡೆ ಮಲಗಿದ್ದು ದಿನಾಂಕ: 28.06.2025 ರಂದು ಬೆಳಿಗ್ಗೆ 06:20 ಗಂಟೆಗೆ ಎದ್ದು ನೋಡಿದಾಗ ಮಲಗಿದ್ದ ಕೋಣೆಯ ಮರದ ಕಪಾಟಿನ ಬಾಗಿಲು ತೆರೆದಿತ್ತು. ಮನೆಯ ಇನ್ನೊಂದು ರೂಮಿಗೆ ಹೋಗಿ ನೋಡಿದಾಗ ರೂಮ್‌ನ ಒಳಗಡೆ ಇದ್ದ ಕಬ್ಬಿಣದ ಕಪಾಟಿನ ಬಾಗಿಲು ತೆರೆದಿದ್ದು ಅದರ ಒಳಗಡೆ ಇದ್ದ ಸೊತ್ತುಗಳನ್ನು ಜಾಲಾಡಿ ಚೆಲ್ಲಾಪಿಲ್ಲಿ ಮಾಡಿರುವುದು ಕಂಡು ಬಂದಿದೆ. ಬಳಿಕ ಅಡುಗೆ ಕೋಣೆಗೆ ಹೋಗಿ ನೋಡಿದಾಗ ಕಿಟಕಿಗೆ ಹಾಕಿದ್ದ ಕೊಂಡಿ ಜಖಂ ಮಾಡಿರುವುದು ಕಂಡು ಬಂದಿದ್ದಲ್ಲದೆ ಅಡುಗೆ ಕೋಣೆಯ ಬಾಗಿಲು ಕೂಡ ತೆರೆದಿರುವುದು ಗೊತ್ತಾಗಿದೆ.ಮರದ ಕಪಾಟಿನ ಡ್ರಾವರಿನ ಒಳಗಡೆ ಇಟ್ಟಿದ್ದ ಬಂಗಾರದ 1)ಕರಿಮಣಿ ಸರ -1(28 ಗ್ರಾಂ ಮೌಲ್ಯ 2, 75,000/-). 2) ಬಳೆ -2(20 ಗ್ರಾಂ- ಮೌಲ್ಯ 1,80,000/-), 3)ಪಕಳ ಸರ-1 (16 ಗ್ರಾಂ ಮೌಲ್ಯ1,44,000/-), 4)ಮುತ್ತು ಸರ-1(20 ಗ್ರಾಂ- ಮೌಲ್ಯ 1,80,000/-), 5)ಕಿವಿ ಓಲೆ -1 ಜೊತೆ(8 ಗ್ರಾಂ – ಮೌಲ್ಯ 90,000/-), 6) ಕಿವಿ ಓಲೆ -1 ಜೊತೆ( 10 ಗ್ರಾಂ – ಮೌಲ್ಯ 1,00,000/-), 7)ಕಿವಿಯ ಚಿಕ್ಕ ಓಲೆ- 1ಜೊತೆ(3 ಗ್ರಾಂ ಮೌಲ್ಯ 24,000/-). 8)ಸರ -1( 20 ಗ್ರಾಂ – ಮೌಲ್ಯ 1,80,000/-),9) ಉಂಗುರ -3 ( 6 ಗ್ರಾಂ- ಮೌಲ್ಯ 48,000/-). 10) ಪೆಂಡೆಂಟ್‌ -1( 2 ಗ್ರಾಂ – ಮೌಲ್ಯ 18,000/-) 11)ಬ್ರಾಸ್‌ಲೈಟ್‌- 1( 4 ಗ್ರಾಂ- 36,000/-) ಈ ಸೊತ್ತುಗಳನ್ನು ಯಾರೋ ಕಳ್ಳರು ಅಡುಗೆ ಕೋಣೆಯ ಕಿಟಕಿಯ ಚಿಲಕವನ್ನು ಮುರಿದು ಕಿಟಕಿ ಮೂಲಕ ಅಡುಗೆ ಕೋಣೆಯ ಬಾಗಿಲಿನ ಚಿಲಕವನ್ನು ತೆರೆದು ಒಳ ಪ್ರವೇಶಿಸಿ ರೂಮ್‌ನ ಒಳಗಡೆ ಮರದ ಕಪಾಟಿನ ಒಳಗಡೆ ಡ್ರಾವರ್‌ನಲ್ಲಿರಿಸಿದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!