- Advertisement -
- Advertisement -
ಕೊಡಗು: ನಾವೆಲ್ಲಾ ನೂತನ ರಸ್ತೆ ಉದ್ಘಾಟನಾ ಕಾರ್ಯಕ್ರಮಕ್ಕೆ ಸಾಮಾನ್ಯವಾಗಿ ರಾಜಕಾರಣಿಗಳು ಮಾಡೋದನ್ನು ನೋಡಿದ್ದೇವೆ. ಆದರೆ ಕೊಡಗಿನ ನಿಟ್ಟೂರು ಗ್ರಾಮದ ಜಾಗಲೆಯಲ್ಲಿನ ಅಳಮೇಂಗಡ ಬೋಸ್ ಮಂದಣ್ಣ ಎಂಬವರ ಕಾಪಿ ತೋಟದ ಕಡಂಗ ಮುಖೇನ ಮಲ್ಲೂರು ಭಾಗಕ್ಕೆ ನಿಟ್ಟೂರು ಗ್ರಾಮ ಪಂಚಾಯಿತಿ ವತಿಯಿಂದ ಹೊಸದಾಗಿ ನಿರ್ಮಾಣ ಮಾಡಿರುವ ನೂತನ ಮಣ್ಣಿನ ರಸ್ತೆ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ ಹುಲಿಯೊಂದು ರಾತ್ರಿ ವೇಳೆ ಅದೇ ರಸ್ತೆಯಲ್ಲಿ ಸಂಚರಿಸಿ ರಸ್ತೆ ಉದ್ಘಾಟಿಸಿದೆ.
ಹೊಸ ರಸ್ತೆಯಲ್ಲಿ ಹುಲಿರಾಯನ ಹೆಜ್ಜೆ ಗುರುತು ನೋಡಿದ ಸ್ಥಳೀಯರು ಇದೀಗ ಬೆಚ್ಚಿ ಬಿದ್ದಿದ್ದಾರೆ. ಮನೆಯಿಂದ ಹೊರಗೆ ಬರೋದಕ್ಕೆ ಹಿಂದೇಟು ಹಾಕುತ್ತಿದ್ದಾರೆ.
- Advertisement -