Wednesday, April 24, 2024
Homeಕರಾವಳಿಉಡುಪಿಉಡುಪಿಯಲ್ಲಿ ನದಿಗೆ ಈಜೋದಕ್ಕೆ ತೆರಳಿದ ಮೂವರು ನೀರು ಪಾಲು

ಉಡುಪಿಯಲ್ಲಿ ನದಿಗೆ ಈಜೋದಕ್ಕೆ ತೆರಳಿದ ಮೂವರು ನೀರು ಪಾಲು

spot_img
- Advertisement -
- Advertisement -

ಉಡುಪಿ: ಈಜೋದಕ್ಕೆ ತೆರಳಿದ ಮೂವರು ನೀರು ಪಾಲಾದ ಘಟನೆ ಉಡುಪಿಯ ಪಾಂಬೂರು ಅಮಾಸೆಕರಿಯ ಬಳಿ ನಡೆದಿದೆ. ಪಾಪನಾಶಿನಿ ನದಿಗಿಳಿದ ಮೂವರು ಯುವಕರು ನೀರು ಪಾಲಾಗಿದ್ದಾರೆ.

ಶಿರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪಾಂಬೂರು ಅಮಾಸೆಕರಿಯ ಮೂವರು ಯುವಕರು ನೀರುಪಾಲಾಗಿದ್ದಾರೆ. ಮೃತರನ್ನು ಸುಭಾಷ್ ನಗರ ಸರ್ಕಾರಿಗುಡ್ಡೆ ನಿವಾಸಿ ಮೊಹಮ್ಮದ್ ಜಾಬೀರ್(18),ಕುರ್ಕಾಲು ಸುಭಾಷ್ ನಗರದ ನಿವಾಸಿ ಮಹಮ್ಮದ್ ರಿಜ್ವಾನ್(18) ಮತ್ತು ಮೂಡಬಿದಿರೆ ತಾಕೊಡೆ ನಿವಾಸಿ ಕೆಲ್ವಿನ್ ಕ್ಯಾಸ್ತಲಿನೋ(21) ಎಂದು ಗುರುತಿಸಲಾಗಿದೆ.

ಸ್ಥಳಕ್ಕೆ ಕಾಪು ವ್ರತ್ತ ನಿರೀಕ್ಷಕ ಪ್ರಕಾಶ್ ಮತ್ತು ಶಿರ್ವ ಕ್ರೈಮ್ ಎಸ್ ಐ ವೇದಾವತಿ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.

- Advertisement -
spot_img

Latest News

error: Content is protected !!