- Advertisement -
- Advertisement -
ಕೇರಳ: ಕಳ್ಳತನಕ್ಕಾಗಿ ಅಂಗಡಿಗೆ ನುಗ್ಗಿದ್ದ ಕಳ್ಳ ಅಲ್ಲಿ ಹಣ ಸಿಗದೆ ಮಾಲೀಕನಿಗೆ ಪತ್ರ ಬರೆದಿಟ್ಟು ಹೋಗಿರುವ ವಿಲಕ್ಷಣ ಘಟನೆ ಕೇರಳದ ತ್ರಿಶೂರ್ ಜಿಲ್ಲೆಯ ಕುನ್ನಂಕುಲಂನಲ್ಲಿ ಈ ಘಟನೆ ನಡೆದಿದೆ.
ಬೈಜು ಆರ್ಕೆಟ್ ಹೆಸರಿನ ಶಾಪಿಂಗ್ ಕ್ಲಾಂಪ್ಲೆಕ್ಸ್ನಲ್ಲಿರುವ ಅಂಗಡಿಯೊಂದಕ್ಕೆ ನುಗ್ಗಿದ್ದ ಕಳ್ಳಹಣಕ್ಕಾಗಿ ಹುಡುಕಾಡಿದ್ದಾನೆ. ಆದ್ರೆ ಮಾಲೀಕ ಎಲ್ಲಾ ಹಣ ಮನೆಗೆ ತೆಗೆದುಕೊಂಡು ಹೋಗಿದ್ದ. ಇದರಿಂದ ಬೇಸರಗೊಂಡ ಕಳ್ಳ ಮಾಲೀಕನಿಗೆ ಪತ್ರ ಬರೆದಿದ್ದಾನೆ.
ಅಂಗಡಿಯಲ್ಲಿ ಹಣ ಇಲ್ಲದಿದ್ದರೆ ಬಾಗಿಲು ಏಕೆ ಹಾಕಿದ್ದೀರಿ? ಬಾಗಿಲು ಒಡೆದ ನನ್ನ ಶ್ರಮ ವ್ಯರ್ಥವಾಗಿದೆ ಎಂದು ಬರೆದಿದ್ದಾನೆ. ಜತೆಗೆ ನಿಮ್ಮಅಂಗಡಿಯಿಂದ ಒಂದು ಜೊತೆ ಬಟ್ಟೆ ಮಾತ್ರ ತೆಗೆದುಕೊಳ್ಳುತ್ತೇನೆ ಎಂದು ಬರೆದಿದ್ದಾನೆ.
- Advertisement -