- Advertisement -
- Advertisement -
ಕುಂದಾಪುರ: ಸರಗಳ್ಳನೊಬ್ಬ ಕಳ್ಳತನ ಮಾಡಿ ಜನರ ಕೈಗೆ ಸಿಕ್ಕಿಬಿದ್ದು ಏಟು ತಿಂದ ಘಟನೆ ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ ನಡೆದಿದೆ.
ಕೋಟೇಶ್ವರದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಕಳ್ಳ ಸರ ಕಳ್ಳತನ ಮಾಡಿದ್ದಾನೆ.ಈ ವೇಳೆ ಮಹಿಳೆ ಜೋರಾಗಿ ಕೂಗಿಕೊಂಡಾಗ ಸರ ಕಸಿದು ಪರಾರಿಯಾಗಲು ಯತ್ನಿಸುತ್ತಿದ್ದ ಕಳ್ಳನನ್ನು ಹಿಡಿದಿದ್ದಾರೆ.
ಸಿಕ್ಕಿಹಾಕಿಕೊಂಡ ಸರ ಕಳ್ಳನಿಗೆ ಥಳಿಸಿದ ಸ್ಥಳೀಯರು ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
- Advertisement -