- Advertisement -
- Advertisement -
ಶಿವಮೊಗ್ಗ: ಆರೋಪಿಯನ್ನು ನೋಡಿಕೊಳ್ಳುತ್ತಿದ್ದ ಕಾನ್ಸ್ಟೇಬಲ್ ಮೊಬೈಲ್ ನಲ್ಲಿ ಬ್ಯುಸಿಯಾಗಿದ್ದ ವೇಳೆ ಕಳ್ಳನೊಬ್ಬ ಠಾಣೆಯಿಂದಲೇ ಎಸ್ಕೇಪ್ ಆದ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಪ್ರತಾಪ ಸಿಂಗ್ ತಪ್ಪಿಸಿಕೊಂಡ ಆರೋಪಿ.
ಟ್ರ್ಯಾಕ್ಟರ್ ಕಳ್ಳತನದ ವಿಚಾರಣೆಗೆಂದು ಪ್ರತಾಪ ಸಿಂಗ್ ನನ್ನು ಠಾಣೆಗೆ ಕರೆ ತರಲಾಗಿತ್ತು. ಈ ವೇಳೆ ಶೌಚಾಲಯಕ್ಕೆ ಹೋಗಬೇಕೆಂದು ಹೇಳಿ ಹೋಗಿದ್ದಾನೆ. ಶೌಚಾಲಯವು ಪೊಲೀಸ್ ಠಾಣೆಯ ಮೇಲ್ಭಾಗದಲ್ಲಿದ್ದು, ಅಲ್ಲಿಗೆ ಹೋದಾಗ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ.
ಆರೋಪಿಯನ್ನು ನೋಡಿಕೊಳ್ಳುತ್ತಿದ್ದ ಕಾನ್ಸ್ಟೇಬಲ್ ರಮೇಶ್ ಮೊಬೈಲ್ನಲ್ಲಿ ಮಾತನಾಡುತ್ತಿರುವಾಗ ಮೆಟ್ಟಿಲು ಇಳಿದು ಪೊಲೀಸ್ ಠಾಣೆಯ ಮುಖ್ಯ ಗೇಟ್ನಿಂದಲೇ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
- Advertisement -