- Advertisement -
- Advertisement -
ದೆಹಲಿ: ಕೇಂದ್ರ ಸರ್ಕಾರ ಕಪ್ಪು ಹಣ ನಿಯಂತ್ರಣಕ್ಕಾಗಿ ಮತ್ತೊಂದು ಮಹತ್ವದ ತೀರ್ಮಾನ ಕೈಗೊಂಡಿದೆ. ಇನ್ನು ಮುಂದೆ ಚಿನ್ನ ಖರೀದಿ ವೇಳೆ ಗ್ರಾಹಕರು ಕೆವೈಸಿ ದಾಖಲೆ ಸಲ್ಲಿಸುವುದು ಕಡ್ಡಾಯ.ಈ ಹೊಸ ನಿಯಮ ಕುರಿತಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2021-22 ನೇ ಸಾಲಿನ ಬಜೆಟ್ ಮಂಡನೆ ಸಂದರ್ಭದಲ್ಲಿ ಮಾತನಾಡಲಿದ್ದಾರೆ ಎನ್ನಲಾಗಿದೆ.
ಈ ನಿಯಮದಂತೆ ಎರಡು ಲಕ್ಷಕ್ಕಿಂತ ಕಡಿಮೆ ಮೊತ್ತದ ಚಿನ್ನ ಖರೀದಿ ವೇಳೆ ಖರೀದಿದಾರರು ತಮ್ಮ ಪ್ಯಾನ್, ಆಧಾರ್ ಕಾರ್ಡ್, ಮತದಾರರ ಚೀಟಿ ಸೇರಿದಂತೆ ಯಾವುದಾದರೂ ಒಂದು ದಾಖಲೆಯನ್ನು ಚಿನ್ನಾಭರಣ ಮಳಿಗೆಯವರಿಗೆ ನೀಡಬೇಕಾಗುತ್ತದೆ.
- Advertisement -