Saturday, May 18, 2024
Homeತಾಜಾ ಸುದ್ದಿತರಗತಿಗೆ ಹಾಜರಾಗುತ್ತಿಲ್ಲವೆಂದು ಪೋಷಕರಿಗೆ ದೂರು ನೀಡಿದ ಉಪನ್ಯಾಸಕ:ತರಗತಿಗೆ ಲಾಂಗ್ ತಂದು ಆವಾಜ್ ಹಾಕಿದ ವಿದ್ಯಾರ್ಥಿ!

ತರಗತಿಗೆ ಹಾಜರಾಗುತ್ತಿಲ್ಲವೆಂದು ಪೋಷಕರಿಗೆ ದೂರು ನೀಡಿದ ಉಪನ್ಯಾಸಕ:ತರಗತಿಗೆ ಲಾಂಗ್ ತಂದು ಆವಾಜ್ ಹಾಕಿದ ವಿದ್ಯಾರ್ಥಿ!

spot_img
- Advertisement -
- Advertisement -

ಮಂಡ್ಯ: ತಂದೆ ತಾಯಿಗೆ ತನ್ನ ಬಗ್ಗೆ ದೂರು ಹೇಳಿದ್ದಕ್ಕೆ ವಿದ್ಯಾರ್ಥಿಯೊಬ್ಬ ಶಿಕ್ಷಕರಿಗೆ ತರಗತಿಯಲ್ಲಿ ಲಾಂಗ್ ತೋರಿಸಿ ಆವಾಜ್ ಹಾಕಿದ್ದಾನೆ‌.

ನಾಗಮಂಗಲ ತಾಲೂಕಿನ ಬಿ.ಜಿ. ನಗರ ಡಿಪ್ಲೋಮಾ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಅವರೇಗೆರೆ ಗ್ರಾಮದ ಉದಯ್ ಗೌಡ (18) ಲಾಂಗ್ ತೋರಿಸಿದ ವಿದ್ಯಾರ್ಥಿಯಾಗಿದ್ದಾನೆ.

ವಿದ್ಯಾರ್ಥಿ ಉದಯ್ ಗೌಡ ತರಗತಿಗೆ ಬರುತ್ತಿಲ್ಲವೆಂದು ಉಪನ್ಯಾಸಕ ಚಂದನ್ ವಿದ್ಯಾರ್ಥಿಯ ಪೋಷಕರ ಗಮನಕ್ಕೆ ತಂದಿದ್ದರು.ವಿದ್ಯಾರ್ಥಿ ಉದಯ್ ಗೌಡ ತರಗತಿಯಲ್ಲಿ ಲಾಂಗ್ ತೋರಿಸಿದ ಬಳಿಕ ಉಪನ್ಯಾಸಕ ಚಂದನ್ ಬೆಳ್ಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ‌.

ಅನಂತರ ವಿದ್ಯಾರ್ಥಿ ಉದಯ್ ಪೋಷಕರೊಂದಿಗೆ ಬಂದು ಉಪನ್ಯಾಸಕರ ಕ್ಷಮೆಯಾಚಿಸಿದ್ದಾರೆ.

- Advertisement -
spot_img

Latest News

error: Content is protected !!