- Advertisement -
- Advertisement -
ಮಡಿಕೇರಿ : ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತೆ ಅಂತಾ ಮಲ ತಂದೆ 5 ವರ್ಷದ ಮಗುವನ್ನು ಕೊಂದ ಘಟನೆ, ಕೊಡಗಿನ ಪೊನ್ನಂಪೇಟೆಯಲ್ಲಿ ನಡೆದಿದೆ.
ಪೊನ್ನಂಪೇಟೆ ತಾಲೂಕಿನ ವೆಸ್ಟ್ ನೆಮ್ಮಲೆ ಗ್ರಾಮದ, ರವಿಯೊಂದಿಗೆ ಮೈಸೂರು ಜಿಲ್ಲೆಯ ಹುಣಸೂರಿನ ಲಕ್ಷ್ಮೀ ಎಂಬಾಕೆ ತನ್ನ ಪತಿಯನ್ನು ಬಿಟ್ಟು ಓಡಿ ಬಂದು ತನ್ನ 5 ವರ್ಷದ ಮಗುವಿನೊಂದಿಗೆ ವಾಸಿಸುತ್ತಿದ್ದಳು. ಆದ್ರೇ ಪದೇ ಪದೇ ಅವರ ಅಕ್ರಮ ಸಂಬಂಧಕ್ಕೆ 5 ವರ್ಷದ ಮಗು ಅಡ್ಡಿಯಾಗುತ್ತಿತ್ತು.
ಇದೇ ವಿಚಾರಕ್ಕೆ ಅನೇಕ ಬಾರಿ ಲಕ್ಷ್ಮೀ ಹಾಗೂ ರವಿ ಜೊತೆಗೆ ಜಗಳ ಕೂಡ ಆಗಿತ್ತು. ನಮ್ಮಿಬ್ಬರ ನಡುವೆ ಮಗು ಇರೋದು ಬೇಡ ಎಂಬುದಾಗಿ ಪದೇ ಪದೇ ರವಿ ಲಕ್ಷ್ಮೀ ಜೊತೆಗೆ ಗಲಾಟೆಗೆ ಇಳಿಯುತ್ತಿದ್ದನು. ಇದೇ ವಿಚಾರವಾಗಿ ಗಲಾಟೆ ನಡೆದು, ರಾತ್ರಿ ಮಗುವನ್ನು ಮಲತಂದೆ ರವಿ ಕೊಂದು ಹಾಕಿರುವುದಾಗಿ ತಿಳಿದು ಬಂದಿದೆ. ಈ ಸಂಬಂಧ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -