Wednesday, June 24, 2026
Homeತಾಜಾ ಸುದ್ದಿಮಧ್ಯ ಪ್ರಾಚ್ಯದಲ್ಲಿ‌ ಸಿಲುಕಿರುವವರಿಗಾಗಿ ಸ್ಟೇಟ್ ಎಮರ್ಜೆನ್ಸಿ ಕಾಲ್ ಸೆಂಟರ್ ಓಪನ್; ಸಚಿವ ಕೃಷ್ಣ ಭೈರೇಗೌಡ ಮಾಹಿತಿ

ಮಧ್ಯ ಪ್ರಾಚ್ಯದಲ್ಲಿ‌ ಸಿಲುಕಿರುವವರಿಗಾಗಿ ಸ್ಟೇಟ್ ಎಮರ್ಜೆನ್ಸಿ ಕಾಲ್ ಸೆಂಟರ್ ಓಪನ್; ಸಚಿವ ಕೃಷ್ಣ ಭೈರೇಗೌಡ ಮಾಹಿತಿ

- Advertisement -
- Advertisement -

ಬೆಂಗಳೂರು: ಯುದ್ಧದ ಹಿನ್ನೆಲೆಯಲ್ಲಿ ಮಧ್ಯ ಪ್ರಾಚ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿರುವವರಿಗಾಗಿ ಸ್ಟೇಟ್ ಎಮರ್ಜೆನ್ಸಿ ಕಾಲ್ ಸೆಂಟರ್ ಓಪನ್ ಮಾಡಲಾಗಿದೆ ಎಂದು ಕಂದಾಯ ಸಚಿವ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವರು, 080- 22340676, 22253707 ಸಹಾಯವಾಣಿಗೆ ಕರೆ ಮಾಡಬಹುದು. ಏರ್ ಫೋರ್ಟ್ ಗಳಲ್ಲಿ ಸಿಕ್ಕಿ ಹಾಕಿಕೊಂಡಿರುವವರು ವೀಸಾ ಸಮಸ್ಯೆ ಇದ್ದರೆ ಈ ಕಾಲ್ ಸೆಂಟರ್ ಗೆ ಕಾಲ್ ಮಾಡಿ ಮಾಹಿತಿ ಕೊಡಿ. ಆಗ ನಾವು ಕೇಂದ್ರ ಸರ್ಕಾರದ ಜೊತೆ ಮಾತನಾಡಿ ಸ್ಥಳೀಯ ವೀಸಾಗೆ ವ್ಯವಸ್ಥೆ ಮಾಡಿಸುತ್ತೇವೆ ಎಂದು ಹೇಳಿದ್ದಾರೆ.

ಅಲ್ಲದೇ, ಏರ್ ಪೋರ್ಟ್ ನಲ್ಲಿ ಸಿಲುಕಿಕೊಂಡವರು ವೀಸಾ ಮೂಲಕ ಹೊರ ಬಂದರೆ ಅವರಿಗೆ ರಾಯಭಾರ ಕಚೇರಿ ಮೂಲಕ ಹೊಟೆಲ್ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿರುವ ಕೃಷ್ಣ ಭೈರೇಗೌಡ,
ಹೋಟೆಲ್ ಖರ್ಚು ವೆಚ್ಚವನ್ನು ಕರ್ನಾಟಕ ಸರ್ಕಾರ ಭರಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.

ಕೇಂದ್ರ ಸರ್ಕಾರದೊಂದಿಗೆ ರಾಜ್ಯ ಸರ್ಕಾರ ನಿರಂತರ ಸಂಪರ್ಕದಲ್ಲಿದ್ದು, ಸದ್ಯಕ್ಕೆ 100 ಜನ ದುಬೈನಲ್ಲಿ ಮತ್ತು ಬಹರೈನ್ ನಲ್ಲಿ 9 ಜನರು ಸಿಲುಕಿರುವ ಮಾಹಿತಿ ಲಭ್ಯವಾಗಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.

- Advertisement -

Latest News

error: Content is protected !!