ಬೆಂಗಳೂರು:ನಿನ್ನೆ ಕೆಜಿ ಹಳ್ಳಿಯಲ್ಲಿ ಎಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಕಂಡ ಕಂಡಲ್ಲಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ರು. ಅಮಾಯಕರ ಮನೆಗಳನ್ನು ಸುಟ್ಟು ಹಾಕಿದ್ರು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರೋದಕ್ಕೆ ಕೊನೆಗೆ ಪೊಲೀಸರು ಫೈರಿಂಗ್ ನಡೆಸಬೇಕಾಯಿತು. ಮೂವರು ಪೊಲೀಸರ ಗುಂಡೇಟಿಗೆ ಬಲಿಯಾದರು.
ಆದರೆ ಇಷ್ಟೆಲ್ಲಾ ನಡೆಯುತ್ತಿದ್ದರೆ ಮತ್ತೊಂದು ಕಡೆ ಸಾಮರಸ್ಯ ಸಾರುವ ಘಟನೆಯೂ ನಡೆಯಿತು. ಕಂಡ ಕಂಡಲ್ಲಿ ಬೆಂಕಿ ಹಚ್ಚುತ್ತಿದ್ದವರು ಒಂದೇ ಕಡೆ ಆದ್ರೆ ಮತ್ತೊಂದು ಕಡೆ ಮುಸ್ಲಿಂ ಬಾಂಧವರು ಹಿಂದೂ ದೇವಾಲಯದ ರಕ್ಷಣೆಗೆ ನಿಂತಿದ್ರು. ಮುಸ್ಲಿಂ ಯುವಕರು ದೇಗುಲದ ಸುತ್ತ ಮಾನವ ಸರಪಳಿ ನಿರ್ಮಿಸಿ, ರಕ್ಷಣೆಗೆ ಮುಂದಾಗಿದ್ರು. ಈ ವಿಡಿಯೋ ಇದೀಗ ವೈರಲ್ ಆಗಿದ್ದು ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಮಗೆ ಬೇಕಾಗಿರೋದು ಇಂತಹ ಭಾರತ ಅನ್ನುತ್ತಿದ್ದಾರೆ ಅನೇಕರು. ಸಮುದಾಯಗಳು ಧರ್ಮದ ಹೆಸರಲ್ಲಿ ಕಿತ್ತಾಡಿ ಅಮಾಯಕರು ಬಲಿಯಾಗುವ ಬದಲು ಪರಸ್ಪರ ಒಬ್ಬರಿಗೊಬ್ಬರು ನೆರವಾಗುತ್ತಾ ಇದ್ದರೆ ಅದೆಷ್ಟು ಚಂದ ಅನ್ನೋ ಮಾತುಗಳು ಕೇಳಿ ಬರುತ್ತಿದೆ.