Thursday, May 9, 2024
Homeತಾಜಾ ಸುದ್ದಿ'ಮುಖ್ಯಮಂತ್ರಿಗಳೇ, ನನ್ನ ಎರಡೂ ಚಡ್ಡಿ ಹರಿದಿದೆ.. ದಯವಿಟ್ಟು ಬಟ್ಟೆ ಅಂಗಡಿ ಓಪನ್ ಮಾಡಿ': ಮುಖ್ಯಮಂತ್ರಿ ಬಳಿ...

‘ಮುಖ್ಯಮಂತ್ರಿಗಳೇ, ನನ್ನ ಎರಡೂ ಚಡ್ಡಿ ಹರಿದಿದೆ.. ದಯವಿಟ್ಟು ಬಟ್ಟೆ ಅಂಗಡಿ ಓಪನ್ ಮಾಡಿ’: ಮುಖ್ಯಮಂತ್ರಿ ಬಳಿ ವಿಚಿತ್ರ ಬೇಡಿಕೆ

spot_img
- Advertisement -
- Advertisement -

ಮೈಸೂರು: ಲಾಕ್ ಡೌನ್ ನಿಂದಾಗಿ ಕೇವಲ ಅಗತ್ಯವಸ್ತುಗಳ ವ್ಯಾಪಾರಕ್ಕಷ್ಟೇ ಸರ್ಕಾರ ಅನುಮತಿ ನೀಡಿದೆ. ಆದರೆ ಈ ನಡುವೆ ಮೈಸೂರಿನಲ್ಲಿ ವ್ಯಕ್ತಿಯೋರ್ವ ನನ್ನ ಬಳಿ ಇರುವ ಎರಡು ಒಳಉಡುಪು ಹರಿದು ಹೋಗಿದೆ, ದಯವಿಟ್ಟು ಬಟ್ಟೆ ಅಂಗಡಿ ತೆರೆಸಿ ಎಂದು ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪರ ಬಳಿ ಮನವಿ ಮಾಡಿದ್ದಾರೆ.

ಹೌದು, ಈ ಕುರಿತು ಸಿಎಂ ಯಡಿಯೂರಪ್ಪಗೆ ಪತ್ರ ಬರೆದಿರುವ ಮೈಸೂರಿನ ಚಾಮರಾಜಪುರದ ನರಸಿಂಹಮೂರ್ತಿ ಎಂಬವರು, ಲಾಕ್ ಡೌನ್ ನಡುವೆಯೂ ವಾರಕ್ಕೆ ಒಂದು ಸಲ ಬಟ್ಟೆ ಅಂಗಡಿಯನ್ನು ತೆರೆದು, ನಮ್ಮ ಒಳ ಉಡುಪಿನ ಸಮಸ್ಯೆಯನ್ನು ಪರಿಹರಿಸಿ . ನನ್ನ ಬಳಿ ಇರುವ ಎರಡು ಒಳಉಡುಪು ಹರಿದು ಹೋಗಿದೆ, ದಯವಿಟ್ಟು ಬಟ್ಟೆ ಅಂಗಡಿ ತೆರೆಸಿ ಎಂದು ಬಿ ಎಸ್‌ ಯಡಿಯೂರಪ್ಪರ ಬಳಿ ಮನವಿ ಮಾಡಿದ್ದಾರೆ.

‘ಮಾನ್ಯ ಮುಖ್ಯಮಂತ್ರಿಗಳೇ, ಕಳೆದೆರಡು ತಿಂಗಳುಗಳಿಂದ ಎಲ್ಲಾ ಅಂಗಡಿಗಳು ತೆರೆಯುತ್ತಿದ್ದರೂ ಅದೇಕೋ ಬಟ್ಟೆ ಅಂಗಡಿಗಳು ತೆರೆಯಲು ಸರ್ಕಾರ ಅನುಮತಿ ನೀಡುತ್ತಿಲ್ಲ. ಕೇವಲ ಎರಡು ಜೊತೆ ಒಳ ಉಡುಪುಗಳನ್ನು ಹೊಂದಿರುವ ನನ್ನಂತಹವರ ಒಳ ಉಡುಪುಗಳು ಹರಿಯುತ್ತಿದೆ. ಇನ್ನು ಪಾಪ ಹೆಣ್ಣುಮಕ್ಕಳ ಬಟ್ಟೆಗಳ ಕಥೆಯೂ ಹೀಗೇ ಇರಬಹುದು. ನಮ್ಮ ಕಷ್ಟ ಯಾರ ಬಳಿ ಹೇಳುವುದು, ತಿಂಗಳಲ್ಲಿ ವಾರಕ್ಕೆ ಒಮ್ಮೆಯಾದರೂ ಬಟ್ಟೆ ಅಂಗಡಿಯನ್ನು ತೆರೆದು ನಮ್ಮ ಒಳ ಉಡುಪಿನ ಸಮಸ್ಯೆಯನ್ನು ಪರಿಹರಿಸಿ ಸ್ವಾಮಿ’ ಎಂದು ಸಿಎಂಗೆ ಮನವಿ ಮಾಡಿದ್ದಾರೆ.

- Advertisement -
spot_img

Latest News

error: Content is protected !!