- Advertisement -


- Advertisement -
ಬೆಂಗಳೂರು: ನಟಿ ಕೃಷಿ ತಾಪಂಡ ಮನೆಯಲ್ಲಿ ಆತ್ಮಹತ್ಯೆಗೆ ಶರಣಾದ ಉದ್ಯಮಿ ವೈಶಾಕ್ ಉಪಾಧ್ಯಾಯ ಅವರ ಅಂತ್ಯಕ್ರಿಯೆ ಚಾಮರಾಜಪೇಟೆಯ ಚಿತಾಗಾರದಲ್ಲಿ ನೆರವೇರಿದೆ.
ಇನ್ನು ಕೊನೆಯ ಬಾರಿ ಗೆಳೆಯನ ಮುಖ ನೋಡಲು ಕೃಷಿ ಕಣ್ಣೀರಿಡುತ್ತಾ ಚಿತಾಗಾರಕ್ಕೆ ಆಗಮಿಸಿದ್ರು. ಆದರೆ ಕೃಷಿ ಆಗಮಿಸುವಷ್ಟರಲ್ಲೇ ಅಂತ್ಯಕ್ರಿಯೆಯ ವಿಧಿವಿಧಾನಗಳು ಆರಂಭವಾಗಿತ್ತು. ಕೊನೆಯ ಘಳಿಗೆಯಲ್ಲೂ ಸ್ನೇಹಿತನ ಮುಖ ನೋಡಲಾಗದೇ ಕೃಷಿ ಕಣ್ಣೀರಿಟ್ಟಿದ್ದಾರೆ.
ಈ ವೇಳೆ ವೈಶಾಕ್ ಕುಟುಂಬಸ್ಥರು ಕೃಷಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ನೀನು ನೋಡೋ ಅವಶ್ಯತಕೆ ಇಲ್ಲ. ಇಲ್ಲಿಂದು ಹೊರಡು ಎಂದಿದ್ದಾರೆ. ಇದರಿಂದ ಅಳುತ್ತಲೇ ಕೃಷಿ ಹಾಗೆಯೇ ವಾಪಸ್ಸಾಗಿದ್ದು, ಕಾರಿನಲ್ಲಿ ಕುಳಿತು ತಲೆ ಚಚ್ಚಿಕೊಂಡು ಕಣ್ಣೀರು ಹಾಕಿದ್ದಾರೆ.
- Advertisement -


